Monday, December 14, 2009

'ವಿಸ್ಮಯ’ಗಳ ಜಾಡಿನಲ್ಲಿ...

ಇದು ವೈಜ್ಞಾನಿಕ ಯುಗ. ಎಲ್ಲಿ ನೋಡಿದರೂ ವಿಜ್ಞಾನ-ತಂತ್ರಜ್ಞಾನದ ಚಮತ್ಕಾರಗಳು, ತಾಂತ್ರಿಕ ಉಪಕರಣಗಳು, ಎಲ್ಲದ್ದಕ್ಕೂ ತಂತ್ರಜ್ಞಾನದ ಸ್ಪರ್ಶ. ಜಗತ್ತೇ ಒಂದು ಹಳ್ಳಿಯೆಂಬ ಕಲ್ಪನೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ವಿಜ್ಞಾನ-ತಂತ್ರಜ್ಞಾನಗಳು ಇಂದು ಸಾವಿನ ರಹಸ್ಯವನ್ನೂ ಬೇಧಿಸುವಲ್ಲಿ ದಾಪುಗಾಲಿಟ್ಟಿವೆ. ಅಷ್ಟರಮಟ್ಟಿಗೆ ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಬದುಕನ್ನು ಆವರಿಸಿವೆ ಆದರೆ...???

ಆದರೆ ಇದಕ್ಕೆ ಸಮನಾಗಿ ಜನರ ಮನಸ್ಸುಗಳು ಬದಲಾಗಿವೆಯೇ? ವೈಜ್ಞಾನಿಕ ದೃಷ್ಟಿಕೋನ ಅವರ ಕಣ್ಣುಗಳಲ್ಲಿ ಮಿಂಚುತ್ತಿದೆಯೇ?, ಕಣ್ಣಿಗೆ ಕಂಡ ಸತ್ಯವನ್ನು ತಾರ್ಕಿಕವಾಗಿ ಚಿಂತಿಸುವ ಮನೋಭಾವ ರೂಡಿಯಾಗಿದೆಯೇ? ಇದಕ್ಕೆ ಉತ್ತರ ಮೌನ. ನಿಜಕ್ಕೂ ಇದು ಅಚ್ಚರಿಯ ಸಂಗತಿ. ಜಗತ್ತು ಈ ಪ್ರಮಾಣದಲ್ಲಿ ಬದಲಾವಣೆ ಕಾಣುತ್ತಿದ್ದರೂ, ಅದೇಕೆ ಭಾರತೀಯರು ಮಾತ್ರ ತಮ್ಮ ಮನಸ್ಸುಗಳನ್ನು ಬದಲಾವಣೆಯಗೆ ತೆರೆಯುತ್ತಿಲ್ಲ, ಇದಕ್ಕೆ ನಾನಾ ಕಾರಣಗಳಿವೆ. ಜನರಲ್ಲಿ ಇಂದಿಗೂ ಮೌಢ್ಯ ತಂಬಿ ತುಳುಕುತ್ತಿದೆ, ಧರ್ಮ-ಶಾಸ್ತ್ರಗಳೇ ಇವರ ಬದುಕಿನ ನಿಯಂತ್ರಕ ಶಕ್ತಿಯಾಗಿ ವಿಜೃಂಭಿಸುತ್ತಿವೆ. ಮಾನವೀಯತೆಗಿಂತ ಜಾತಿ, ಕಂದಾಚಾರಗಳೇ ಮೇಲುಗೈ ಸಾಧಿಸಿವೆ. ದುರಾದೃಷ್ಟದ ಸಂಗತಿಯೆಂದರೆ ಸಮಾಜದ ಓರೆಕೋರೆಗಳನ್ನು ನೇರ ಮಾಡಬೇಕಾದ, ಸಮಾಜದ ಮುನ್ನಡೆಗೆ ಮಾರ್ಗದರ್ಶಿಯಾಗಬೇಕಾದ, ಜನರ ಹೃದಯಗಳಲ್ಲಿ ಬದಲಾವಣೆಯ ಹರಿಕಾರನಾಗಬೇಕಾದ ಮಾಧ್ಯಮಗಳೂ ಕೂಡ ಸಮಾಜದ ಯಥಾವತ್‌ ಪ್ರತಿಬಿಂಬಗಳಂತೆ ವರ್ತಿಸುತ್ತಿವೆ. ಇದಕ್ಕೆ ಸ್ಪಷ್ಟ ನಿದರ್ಶನ. ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ’ಅತಿಮಾನುಷ’ ಹಂದರವುಳ್ಳ ಕಾರ್ಯಕ್ರಮಗಳು.

ಈ ಅತಿಮಾನುಷ ಕಾರ್ಯಕ್ರಮಗಳನ್ನು ನೋಡಿದರೆ ಕನ್ನಡದ ಬಹುತೇಕ ವಾಹಿನಿಗಳೂ ಮೌಢ್ಯತೆಯನ್ನು ಬಿತ್ತುವ ಕಾಯಕದಲ್ಲಿ ಪೈಪೋಟಿಗೆ ಬಿದ್ದಿರುವಂತೆ ಕಾಣುತ್ತಿದೆ. ಜನರ ಮನಸ್ಸುಗಳಲ್ಲಿ ವೈಜ್ಞಾನಿಕ ಮನೋಧರ್ಮ ಬಿತ್ತುವ ಬದಲು ಕೆಲವು ವಿಚಿತ್ರ, ಅಸಹಜ ಘಟನೆಗಳನ್ನೇ ಅತಿಮಾನುವ ಎಂದು ಬಿಂಬಿಸಿ ಜನರ ನಂಬಿಕೆಗೆ ನೀರೆರೆಯುವ ಕೆಲಸವನ್ನು ಈ ಕಾರ್ಯಕ್ರಮಗಳು ಮಾಡುತ್ತಿವೆ. ಇಂಥದ್ದೊಂದು ಪರಂಪರೆಗೆ ಶಂಕುಸ್ಥಾಪನೆ ಮಾಡಿದ್ದು ಟಿವಿ9. ಈ ವಾಹಿನಿಯ ’ಹೀಗೂ ಉಂಟೆ’ ಭರ್ಜರಿ ಯಶಸ್ಸು ಸಾಧಿಸಿತು. ರಾಜ್ಯದ ಮನೆ ಮನೆಯಲ್ಲೂ ಕಾರ್ಯಕ್ರಮಕ್ಕೆ ಕಾದುಕುಳಿತುಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಯಿತು. ಹೀಗೂ ಉಂಟೆ ಕಾರ್ಯಕ್ರಮದಲ್ಲಿ ಪ್ರಸಾರವಾದ ಮರುದಿನ ಆ ಸ್ಥಳದಲ್ಲಿ ಜನಜಾತ್ರೆಯೇ ನೆರೆದಿರುತ್ತದೆ. ಯಾರ ಗಮನಕ್ಕೂ ಬಾರದೆ ಯಾವುದೇ ಹಳ್ಳಿಯೊಂದರಲ್ಲಿದ್ದ ದೇವಸ್ಥಾನ ಸಂಕಷ್ಟದಲ್ಲಿರುವವರಿಗೆ ಪವಿತ್ರ ಸ್ಥಳವಾಗಿರುತ್ತದೆ, ’ಅತಿ’ಮಾನುಷ ವ್ಯಕ್ತಿಯೋ ಇಲ್ಲ ಪವಾಡ ಪುರುಷನೋ ಬೆಳಗಾಗುವುದರೊಳಗೆ ಜನಪ್ರಿಯನಾಗಿಬಿಡುತ್ತಾನೆ. ಈ ಕಾರ್ಯಕ್ರಮದ ಅದ್ಭುತ ಪಾಪುಲಾರಿಟಿಯನ್ನು ಕಂಡ ಇತರ ವಾಹಿನಿಗಳು ತಾವೂ ಇಂಥದೇ ಕಾರ್ಯಕ್ರಮವನ್ನು ಆರಂಭಿಸಿಯೇ ಬಿಟ್ಟವು. ರಾಜ್ಯದ ಮೂಲೆ ಮೂಲೆಯಲ್ಲಿರುವ ’ತರ್ಕಕ್ಕೆ ನಿಲುಕದ, ಅಗೋಚರ, ವಿಸ್ಮಯ, ಭಯಾನಕ, ಅದ್ಭುತ’ ಘಟನೆ, ವ್ಯಕ್ತಿಗಳನ್ನು ಹುಡುಕಲು ಆರಂಭಿಸಿದವು. ಈವರೆಗೆ ಈ ರೀತಿ ’ಕಂಡುಹಿಡಿಯಲಾದ’ ಪವಿತ್ರ ಸ್ಥಳಗಳೆಷ್ಟೋ, ಪವಾಡ ಪುರಷರೆಷ್ಟೋ. ಇನ್ನು ಮುಂದೆ ಕನ್ನಡಿಗರಿಗೆ ಯಾವ ಸಮಸ್ಯೆಗಳೂ ಇರುವುದಿಲ್ಲ.

ಇದೀಗ ಸುವರ್ಣ ವಾಹಿನಿಯೂ ಈ ಪರಂಪರೆಗೆ ಸೇರಿಕೊಂಡಿದ್ದರೂ ತನ್ನದೇ ಹೊಸ ಹಾದಿಯನ್ನು ಹಿಡಿದಿದೆ. ’ನಡೆದದ್ದೇನು’ ಹೆಸರಿನ ಕಾರ್ಯಕ್ರಮ ’ವಿಸ್ಮಯ’ ಸರಣಿಯ ಕಾರ್ಯಕ್ರಮವಾದರೂ ಇದರ ಪ್ರಸ್ತುತಿ ಮಾತ್ರ ಸಂಪೂರ್ಣ ಭಿನ್ನ. ’ನಡೆದದ್ದೇನು’ ಸುವರ್ಣ ವಾಹಿನಿಯಲ್ಲಿ ಈಗಷ್ಟೇ ಆರಂಭವಾಗಿದೆ. ನಿರೂಪಣೆ ವಿಶಿಷ್ಟವಾಗಿದೆ. ಬೆಳಕಿನ ಸಂಯೋಜನೆ, ನಿರೂಪಕನ ಹಿಂಬದಿಯ ಟಿವಿ ಇವೆಲ್ಲ ನಿರೂಪಣೆಯನ್ನು ಆಕರ್ಷಕವಾಗಿಸಿವೆ. ನಿರೂಪಕನಿಗೆ ನಿರೂಪಣೆಯಲ್ಲಿ ಇನ್ನೂ ಲಯ ಸಿಕ್ಕಿಲ್ಲ. ಸ್ಕ್ರಿಪ್ಟ್‌ ಮತ್ತಷ್ಟು ಬಿಗಿಯಾಗಬೇಕು, ಇನ್ನು ಬೆಳಕಿಲ ಪ್ರದೀಪ್‌ ನೀಡಿರುವ ಹಿನ್ನೆಲೆ ಧ್ವನಿ ಚೆನ್ನಾಗಿದೆ. ಯಾವುದೇ ವಿಷಯವನ್ನು ಪ್ರಸ್ತುತಪಡಿಸುವಾಗ, ಘಟನೆಗಳನ್ನು ಚಿತ್ರಗಳ ರೂಪದಲ್ಲಿ ಮರುಸೃಷ್ಟಿ ಮಾಡುವುದು ನನಗೆ ತಿಳಿದ ಮಟ್ಟಿಗೆ ಕನ್ನಡ ಟಿವಿ ಮಾಧ್ಯಮದಲ್ಲೇ ವಿನೂತನ ಪ್ರಯೋಗ. ಇದು ಕಾರ್ಯಕ್ರಮಕ್ಕೆ ಕಲಾತ್ಮಕತೆಯನ್ನು ತಂದುಕೊಟ್ಟಿರುವುದಲ್ಲದೆ, ಚಿತ್ರೀಕರಣದಲ್ಲಿ ಮರುಸೃಷ್ಟಿಸಲು ಸಾಧ್ಯವಾಗದ ಎಷ್ಟೋ ಸನ್ನಿವೇಶಗಳನ್ನು ಇದರಿಂದ ಮರುಸೃಷ್ಟಿಸಲು ಸಾಧ್ಯ.

ಸುವರ್ಣ ವಾಹಿನಿಯ ಈ ಕಾರ್ಯಕ್ರಮ ಕರ್ನಾಟಕದಾಚೆಗಿನ ಪ್ರಕರಣಗಳನ್ನು ಕನ್ನಡಿಗರ ಮುಂದಿಡುತ್ತಿದೆ. ಈ ದೃಷ್ಟಿಯಿಂದ ಈ ಕಾರ್ಯಕ್ರಮ ತನ್ನ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇದೆಲ್ಲಕ್ಕಿಂತ ಬಹಳ ಮುಖ್ಯವಾದ ಅಂಶವೆಂದರೆ, ಈ ಕಾರ್ಯಕ್ರಮ ಯಾವುದೇ ವಿಸ್ಮಯದ ವಿಚಾರಗಳನ್ನು ಎಲ್ಲ ಕೋನಗಳಲ್ಲಿ ವಿಶ್ಲೇಷಣೆಗೊಳಪಡಿಸುತ್ತದೆ. ಅತಿಮಾನುಷವೆಂದು ನಂಬಲಾಗುವ ಒಂದು ಘಟನೆಗೆ ಶಾಸ್ತ್ರ-ಸಂಪ್ರದಾಯಗಳ ವಿವರಣೆ, ಅದಕ್ಕೆ ಜನರ ನಂಬಿಕೆ ಏನೆಂಬುದನ್ನೂ ಇದು ಪ್ರಸ್ತುತಪಡಿಸುತ್ತದೆ. ಇದರ ಜೊತೆಗೆ ತಜ್ಞರಿಂದ ವೈಜ್ಞಾನಿಕವಾಗಿಯೂ ವಿಶ್ಲೇಷಿಸುವ ಇದರ ಪ್ರಯತ್ನ ಇದನ್ನು ಬೇರೆಲ್ಲ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ನಿಲ್ಲಿಸಿದೆ. ಈ ಕಾರ್ಯಕ್ರಮಕ್ಕೆ ಮಾನವೀಯ ನೆಲೆಯೂ ಇದೆ. ಇತ್ತೀಚಿನ ಒಂದು ಸಂಚಿಕೆಯಲ್ಲಿ ತೋರಿಸಿದ ’ವಾನರ ಮಾನವ’ರಿಗೆ ಸರ್ಕಾರದ ಧನಸಹಾಯ ಕೊಡಿಸಿದ್ದು ಇದಕ್ಕೊಂದು ಉದಾಹರಣೆ. ಈ ದೃಷ್ಟಿಯಲ್ಲೂ ಈ ಕಾರ್ಯಕ್ರಮ ಬೇರೆಲ್ಲವುಗಳಿಗಿಂತ ಒಂದು ಹೆಜ್ಜೆ ಮುಂದಿದೆ.

ಆದರೆ ಅಂತಿಮವಾಗಿ ಘಟನೆಯ ಸ್ವರೂಪವನ್ನು ನೇರವಾಗಿ ಹೇಳದೆ ತೀರ್ಮಾನ ನಿಮ್ಮದೇ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಡುತ್ತದೆ. ಜನರ ನಂಬಿಕೆ, ಸಂಪ್ರದಾಯಗಳನ್ನು ಗೌರವಿಸಬೇಕು ನಿಜ. ಹಾಗೆಂದು ಅದು ಮೂಢನಂಬಿಕೆಯಾಗಿದ್ದರೆ, ಅವೈಜ್ಞಾನಿಕವಾಗಿದ್ದರೆ ಅದನ್ನು ಪೋಷಿಸುವುದು ಇಲ್ಲವೇ ನಗಣ್ಯ ಮಾಡುವುದು ಎರಡೂ ತರವಲ್ಲ. ಅತಿಮಾನುಷ ಎಂದು ನಂಬುವ ಯಾವುದೇ ಘಟನೆಯನ್ನು ಆದಷ್ಟೂ ವೈಜ್ಞಾನಿಕ ತಳಹದಿಯಲ್ಲೇ ವಿಶ್ಲೇಷಿಸುವ ಮತ್ತು ಅಂತಿಮವಾಗಿ ಅದ್ಕಕೊಂದು ತಾರ್ಕಿಕ ಅಂತ್ಯ ಕಾಣಿಸುವ ಕೆಲಸನ್ನು ಮಾಡಬೇಕು. ಆಗ ಅದು ಜನರು ಯೋಚಿಸುವಂತೆ ಮಾಡುತ್ತದೆ. ಎಲ್ಲವನ್ನೂ ತರ್ಕಿಸಿ ತೀರ್ಮಾನಿಸಬೇಕೆಂಬ ಧೋರಣೆ ಬೆಳೆಸುತ್ತದೆ. ಎಲ್ಲದ್ದಕ್ಕೂ ವೈಜ್ಞಾನಿಕ ಕಾರಣ ಹುಡುಕುವಂತೆ ಮಾಡುತ್ತದೆ.

ಈ ಜಗತ್ತಿನಲ್ಲಿ ’ತರ್ಕಕ್ಕೆ ನಿಲುಕದ, ವಿಶ್ಲೇಷಣೆಗೆ ದಕ್ಕದ, ಅನುಭವಕ್ಕೆ ಅತೀತವಾದ ಸಹಸ್ರಾರು ಸಂಗತಿಗಳಿವೆ’ಅಂದ ಮಾತ್ರಕ್ಕೆ ಅದೆಲ್ಲವೂ ಅತಿಮಾನುಷವೆಂದೇನೂ ಅಲ್ಲ. ಅದನ್ನು ತರ್ಕಕ್ಕೆ ನಿಲುಕಿಸುವ ಸಾಮರ್ಥ್ಯ ನಮಗಿನ್ನೂ ಬಂದಿಲ್ಲ, ವಿಜ್ಞಾನಕ್ಕಿನ್ನೂ ಅದು ಸಾಧ್ಯವಾಗಿಲ್ಲ ಎಂದೇ ಅರ್ಥ. ಮುಂದೊಂದು ದಿನ ಅದು ಸಾಧ್ಯವಾಗಬಹುದು. ಹೀಗಾಗಿ ತರ್ಕಾತೀತ ಘಟನೆ ಅಥವಾ ಸನ್ನಿವೇಶಗಳನ್ನು ಅತಿಮಾನುಷ ಎಂದು ಥಟ್ಟನೆ ತಿರ್ಮಾನಿಸುವುದು ಅದು ಯಾವುದೋ ಅವ್ಯಕ್ತ ಶಕ್ತಿಯ ಪವಾಡ ಎಂಬು ನಿರ್ಧರಿಸುವುದು ತರವಲ್ಲ.

ಕನ್ನಡಕ್ಕಿದೆಂಥಾ ದುರ್ಗತಿ


ಕುವೆಂಪು ಬರೆದ ’’ಶ್ರೀ ರಾಮಾಯಣ ದರ್ಶನಂ’’ ಕೃತಿ ಕನ್ನಡ ಸಾಹಿತ್ಯದ ಮೇರುಕೃತಿ, ಮಹಾಕಾವ್ಯ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಲಶಪ್ರಾಯವಾಗಿರುವ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲೊಂದು. ಆದರೆ ಇಂಥದ್ದೊಂದು ಮಹತ್ವದ ಕೃತಿ ಲಭ್ಯವಿಲ್ಲದ್ದು ಸಾಹಿತ್ಯ ಪ್ರೇಮಿಗಳಿಗೆ ಕಹಿ ಸತ್ಯವೇ ಸರಿ. ಇಂಥ ಮೇರು ಕೃತಿಯ ಲಭ್ಯತೆ ಏಕಿಲ್ಲ ಎನ್ನುವುದೇ ಸಾಹಿತ್ಯಾಸಕ್ತರ ದೊಡ್ಡ ಪ್ರಶ್ನೆ. ಕನ್ನಡ ಸಾಹಿತ್ಯಕ್ಕೆ, ಮೊಟ್ಟ ಮೊದಲ ಅತ್ಯುನ್ನತ ಸಾಹಿತ್ಯಕ ಪ್ರಶಸ್ತಿ ‘ಜ್ಞಾನಪೀಠ’ವನ್ನು ತಂದುಕೊಟ್ಟು, ಕನ್ನಡ ಸಾಹಿತ್ಯವನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದ ಒಂದು ಮಹಾನ್‌ ಕೃತಿ ಓದುಗರಿಗೆ ಲಭ್ಯವಿಲ್ಲ ಎಂದರೆ ಇದೆಂಥಾ ದುರ್ಗತಿ. ಇದು ಕನ್ನಡಿಗರು ತಲೆ ತಗ್ಗಿಸುವಂಥ ವಿಚಾರ. ಕುವೆಂಪು ಕನ್ನಡ ಸಾಹಿತ್ಯದ ಮೇರು ಪುರುಷ. ಅವರ ತಪಸ್ಸಿನ ಫಲವಾಗಿ ಆವಿರ್ಭವಿಸಿದ ಅನರ್ಘ್ಯ ಕಾವ್ಯವೊಂದು ಓದುಗರಿಗೆ ಲಭ್ಯವಾಗದಿರುವುದು ಅತ್ಯಂತ ಖೇದದ ಸಂಗತಿ.

ಈ ಕೃತಿಯ ಮೂಲ ಹಕ್ಕು ಹೊಂದಿರುವ ಉದಯರವಿ ಪ್ರಕಾಶನ, ಇದನ್ನು ಮೊದಲು ಮುದ್ರಿಸಿತು. ಇದರ ನಂತರ ಕನ್ನಡ ಪುಸ್ತಕ ಪ್ರಾಧಿಕಾರ 2000ನೇ ವರ್ಷದಲ್ಲಿ ಸರ್ಕಾರದ ವಿಶೇಷ ಅನುದಾನದಿಂದ 880 ಪುಟಗಳ ಈ ಬೃಹತ್‌ ಕಾವ್ಯವನ್ನು ಕೇವಲ 40 ರೂಗಳ ರಿಯಾಯಿತಿ ದರದಲ್ಲಿ ಪ್ರಕಟಿಸಿತು. ಕೆಲವೇ ದಿನಗಳಲ್ಲಿ ಈ ಮೇರುಕೃತಿ ಸಹೃದಯರ ಮನೆ ಸೇರಿತು. ಎಲ್ಲೂ ಪ್ರತಿಗಳು ಲಭ್ಯವಾಗದಾದವು. ಅಂದಿನಿಂದ ಇದು ಮರು ಮುದ್ರಣಗೊಂಡಿಲ್ಲ. ನಾನು ಈ ಕೃತಿಗಾಗಿ ಸುತ್ತದೇ ಇರುವ ಪುಸ್ತಕ ಮಳಿಗೆಗೆಳಿಲ್ಲ. ತಡಕಾಡದ ಜಾಗಗಳಿಲ್ಲ. ಒಟ್ಟಿನಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಗಾಗಿ ಮೂಲೆ ಮೂಲೆಯಲ್ಲಿ ಶೋಧಿಸಿದ್ದೇನೆ. ಎಲ್ಲಿಯೂ ಲಭ್ಯವಿಲ್ಲ. ನನ್ನಂತೆಯೇ ಈ ಮಹಾಕಾವ್ಯಕ್ಕಾಗಿ ಹಲವು ಪುಸ್ತಕದಂಗಡಿಗಳನ್ನು ಎಡತಾಕಿದವರನ್ನು ನಾನು ಕಂಡಿದ್ದೇನೆ.

ಈ ಕೃತಿಯ ಲಭ್ಯತೆ ಬೇಡಿಕೆಯ ಪ್ರಶ್ನೆ ಮಾತ್ರವಲ್ಲ. ಗೌರವದ ಪ್ರಶ್ನೆ, ಅಭಿಮಾನದ ಪ್ರಶ್ನೆ. ಇಂಥ ಕೃತಿ ಸಹೃದಯ ಓದುಗರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ಅದನ್ನು ಎಲ್ಲ ಕನ್ನಡಿಗರು ಓದುವಂತೆ ಪ್ರೇರೇಪಿಸುವ ಕೆಲಸವನ್ನು ಸರ್ಕಾರ ಅಥವಾ ಸಂಬಂಧಿತ ಸಂಸ್ಥೆಗಳು ಮಾಡಬೇಕು. ಕೂಡಲೇ ಸರ್ಕಾರ ಈ ಕೃತಿಯನ್ನು ಮರು ಮುದ್ರಿಸಿ ರಿಯಾಯಿತಿ ದರದಲ್ಲಿ ಎಲ್ಲೆಡೆ ಲಭ್ಯವಾಗುವಂತೆ ಮಾಡಬೇಕು. ಆಯಾ ಪ್ರದೇಶದ ಸಾಂಸ್ಕೃತಿಕ ಅನನ್ಯತೆಯನ್ನು, ಅದರ ವಿವಿಧ ಆಯಾಮಗಳನ್ನು ರಕ್ಷಿಸದ ಸರ್ಕಾರ ಸಂಸ್ಕೃತಿಹೀನ, ಜನರ ಬದುಕನ್ನು ಹಸನಾಗಿಸಲು ಭೌತಿಕ ಅಭಿವೃದ್ಧಿಯೊಂದೇ ಸಾಕಾಗುವುದಿಲ್ಲ, ಬದಲಿಗೆ ಸಾಂಸ್ಕೃತಿಕ ಅಭಿವೃದ್ಧಿಯೂ ಬಹಳ ಮುಖ್ಯ ಎನ್ನುವುದನ್ನು ಆಳುವ ಸರ್ಕಾರ ಅರಿತುಕೊಳ್ಳಬೇಕು.

’ಅವತಾರ್‌’ ಚಿತ್ರದ ಟ್ರೈಲರ್‌

Wednesday, December 2, 2009

’ಶ್ರೀ ರಾಮಾಯಣ ದರ್ಶನಂ’ ಎಲ್ಲಿ ದೊರೆವುದಯ್ಯ???


ಶ್ರೀ ರಾಮಾಯಣ ದರ್ಶನಂ ಕೃತಿ ಕನ್ನಡ ಸಾಹಿತ್ಯದ ಮೆರುಕೃತಿ, ಮಹಾಕಾವ್ಯ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಳಶಪ್ರಾಯವಾಗಿರುವ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲೊಂದು. ಆದರೆ ಇಂಥದ್ದೊಂದು ಮಹತ್ತವ ಕೃತಿ ಲಭ್ಯವಿಲ್ಲದ್ದು ಸಾಹಿತ್ಯ ಪ್ರೇಮಿಗಳಿಗೆ ಕಹಿ ಸತ್ಯವೇ ಸರಿ. ಇದರ ಮರು ಮುದ್ರಣ ಏಕಿಲ್ಲ ಎನ್ನುವುದೇ ಸಾಹಿತ್ಯಾಸಕ್ತರ ದೊಡ್ಡ ಪ್ರಶ್ನೆ

ಈ ಕೃತಿಯ ಮೂಲ ಹಕ್ಕು ಹೊಂದಿರುವ ಉದಯರವಿ ಪ್ರಕಾಶನ, ಇದನ್ನು ಮೊದಲು ಮುದ್ರಿಸಿತು. ಇದರ ನಂತರ ಕನ್ನಡ ಪುಸ್ತಕ ಪ್ರಾಧಿಕಾರ ಎಲ್ಲರೂ ಇದನ್ನು ಓದಬೇಕೆಂಬ ಮಹದುದ್ದೇಶದಿಂದ 2000ನೇ ವರ್ಷದಲ್ಲಿ ಸರ್ಕಾರದ ವಿಶೇಷ ಅನುದಾನದಿಂದ 880 ಪುಟಗಳ ಈ ಬೃಹತ್‌ ಕಾವ್ಯವನ್ನು ಕೇವಲ 40 ರಾಪಾಯಿಯ ರಿಯಾಯಿತಿ ದರದಲ್ಲಿ ಪ್ರಕಟಿಸಿತು. ಅದಾದ ನಂತರ ಬಹಷಃ ಇದು ಮರು ಮುದ್ರಣಗೊಂಡಿಲ್ಲ ಎಂಬುದು ನನ್ನ ನಂಬಿಕೆ. ಹಾಗಾಗಿ ಇದರ ಲಭ್ಯತೆ ದುರ್ಲಭ.

ಶ್ರೀ ರಾಮಾಯಣ ದರ್ಶನಂ ಕೃತಿಯ ಗದ್ಯಾನುವಾದವನ್ನು ’ಶ್ರೀ ರಾಮಾಯಣ ದರ್ಶನಂ ವಚನಚಂದ್ರಿಕೆ’ ಎಂಬ ಹೆಸರಿನಲ್ಲಿ ದೇಜಗೌ (ದೇ.ಜವರೇಗೌಡ) ಮಾಡಿದ್ದಾರೆ. ನೀವು ಅದನ್ನು ಪರಾಮರ್ಶನ ಮಾಡಬಹುದು. ಕುವೆಂಪು ಅವರ ಮೂಲ ಕೃತಿ ಹಳಕನ್ನಡಲ್ಲಿದ್ದು ಒಬ್ಬ ಸಾಮಾನ್ಯ ಓದುಗನಿಗೆ ಅರ್ಥೈಸಿಕೊಳ್ಳಲು ಕಷ್ಟಸಾಧ್ಯ. ಹಾಗಾಗಿ ಇದರ ಗದ್ಯಾನುವಾದವನ್ನು ಪರಾಮರ್ಶಿಸುವುದರಲ್ಲಿ ಅರ್ಥವಿದೆ. ಇದು ಸಪ್ನ ಬುಕ್‌ ಹೌಸ್‌ ಮತ್ತು ಬಹುತೇಕ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಇದರ ಬೆಲೆ 120 ರೂಪಾಯಿಗಳು. ಹಾಗೂ ಈ ಮೇರು ಕೃತಿಯ ಸರಳ ವಿವರಣೆ, ವಿಮರ್ಶೆ, ವಿಶ್ಲೇಷಣೆ ಮಾಡುವ ಹತ್ತಾರು ಕೃತಿಗಳು ಬಂದಿವೆ. ಅವುಗಳನ್ನೂ ನೀವು ಗಮನಿಸಬಹುದು. ಶಂಕರ‍್ ಮೊಕಾಶಿ ಪುಣೇಕರ್‌ ಇದನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇದು ಹಲವು ಆನ್‌ಲೈನ್ ಬುಕ್‌ಸೈಟ್‌ ಗಳಲ್ಲಿ ಲಭ್ಯವಿದ್ದು ನೀವಿದನ್ನು ಆನ್‌ಲೈನ್‌ನಲ್ಲೇ ಕೊಳ್ಳಬಹುದು.

ಶ್ರೀರಾಮಾಯಣ ದರ್ಶನಂ ಮೂಲ ಕೃತಿಯನ್ನೇ ಓಡಬೇಕೆಂಬುದು ನಿಮ್ಮ ಅಭಿಲಾಷೆಯಾದರೆ, ಅದಕ್ಕೆ ಕೆಲವು ಮಾರ್ಗಗಳಿವೆ.
1. ಈ ಕೃತಿಯನ್ನು ಇಟ್ಟಿರುವ ಸ್ನೇಹಿತರ ಬಳಿ ಅದನ್ನು ಜೆರಾಕ್ಸ್‌ ಮಾಡಿಸಿಕೊಳ್ಳುವುದು,
2. ಬೆಂಗಳೂರಿನಲ್ಲಿ ಕೆಲವು ಅಪ್ರತಿಮ ಸಾಹಿತ್ಯ ಪ್ರೇಮಿಗಳಿದ್ದಾರೆ. ಅವರ ಬಳಿ ಎಲ್ಲೂ ಲಭ್ಯವಾಗದ ಅತ್ಯಂತ ಹಳೆಯ ಮಹತ್ವದ ಕೃತಿಗಳೆಲ್ಲ ಲಭ್ಯವಾಗುತ್ತವೆ. ಅಂಥವರ ವಿಳಾಸ ನನ್ನ ಬಳಿ ಸಧ್ಯ ಲಭ್ಯವಿಲ್ಲ. ಮುಂದೆ ಅದನ್ನು ನಾನಿಲ್ಲಿ ಅಪ್‌ಡೇಟ್‌ ಮಾಡುತ್ತೇನೆ. ಈ ನಿಟ್ಟಿನಲ್ಲಿ ನೀವು ಪ್ರಯತ್ನಿಸಬಹುದು.
3. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲ ಜಿಲ್ಲಾ ಶಾಖೆಗಳಲ್ಲೂ ಶ್ರೀ ರಾಮಾಯಣ ದರ್ಶನಂ ಕೃತಿ ಲಭ್ಯವಿತ್ತು. ಕೆಲವು ಜಿಲ್ಲೆಗಳಲ್ಲಿ ಎಲ್ಲ ಪ್ರತಿಗಳೂ ಮಾರಾಟವಾಗಿಲ್ಲ, ಹಾಗಾಗಿ ಕೆಲವು ಪ್ರತಿಗಳಾದರೂ ಉಳಿದಿರುವ ಸಾಧ್ಯತೆ ಇದೆ. ನೀವು ಟೌನ್‌ ಹಾಲ್‌ ಬಳಿಯ ’ಕನ್ನಡ ಭವನ’ದಲ್ಲಿರುವ ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸಿದರೆ ಈ ಕುರಿತು ಮಾಹಿತಿ ಸಿಗುತ್ತದೆ.

ಕುವೆಂಪು ಜೀವನ, ಸಾಹಿತ್ಯ, ವಿಮರ್ಶೆ, ಸಂದೇಶ, ಜೀವನ ತತ್ವಗಳನ್ನು ವಿಶ್ಲೇಷಿಸುವ, ವಿವರಿಸುವ ಅಸಂಖ್ಯ ಕೃತಿಗಳು ಕನ್ನಡದಲ್ಲಿವೆ. ತಕ್ಷಣದ ಪರಾಮರ್ಶನಕ್ಕೆ ಕೆಳಗಿನ ಕೆಲವು ವೆಬ್‌ತಾಣಗಳನ್ನು ನೋಡಬಹುದು.
ಕುವೆಂಪು ಬಗೆಗೆ ಇಂಗ್ಲಿಷ್‌ನಲ್ಲಿ ಸಂಕ್ಷಿಪ್ತ ಲೇಖನ: http://en.wikipedia.org/wiki/Kuvempu
ಕುವೆಂಪು ಅಧಿಕೃತ ತಾಣ: http://www.kuvempu.com/
ಜ್ಞಾನಪೀಠ ಪ್ರಶಸ್ತಿ ವಿಜೇತರು: http://ekavi.org/jnanpeeth.htm
ಕುವೆಂಪು ಚಿತ್ರಗಳು: http://www.kamat.com/kalranga/kar/writers/kuvempu.htm
ಕುವೆಂಪು ಕುರಿತು: http://www.ourkarnataka.com/Articles/starofmysore/kuvempuremember.htm

ನೀಡುವ ಕೈಗಳಿವು...


ಸ್ನೇಹಿತರೇ,

ನಿಮ್ಮ ನೆರೆಹೊರೆಯಲ್ಲಿ ಎಂದರೆ ಮನೆಯ ಅಕ್ಕಪಕ್ಕ, ನಿಮ್ಮದೇ ಬಡಾವಣೆಯಲ್ಲಿ, ನಿಮ್ಮ ಸ್ನೇಹಿತರ ಮನೆಗಳಲ್ಲಿ, ನಿಮ್ಮ ಬಂಧು-ಬಾಂಧವರ ನಡುವೆ , ನಿಮ್ಮದೇ ಮನೆಯಲ್ಲಿ ಅಥವ ಇನ್ನೆಲ್ಲೋ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿದ್ದಾರಾ? ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ಮುಂದೆ ಓದಲಾಗದ ಬಡತನವೇ? ವಿದ್ಯಾರ್ಥಿ ಚುರುಕುಮತಿ, ಚಾಣಾಕ್ಷನಾಗಿದ್ದೂ ಕುಟುಂಬದ ಹಣಕಾಸಿನ ದಾರಿದ್ಯ್ರದಿಂದ ಓದನ್ನು ಅರ್ಧಕ್ಕೇ ನಿಲ್ಲಿಸಿ ದುಡಿಮೆಗಿಳಿಯಬೇಕಾದ ಅನಿವಾರ್ಯತೆ ಇದೆಯೇ? ಹೌದು ಇಂತಹ ಬಡ , ನತದೃಷ್ಟ ವಿದ್ಯಾರ್ಥಿಗಳು ನಮ್ಮ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹವರನ್ನು ಗುರ್ತಿಸಿ ಅವರಿಗೆ ನೆರವಾಗಬೇಕಾದ್ದು ನಮ್ಮೆಲ್ಲರ ಕರ್ತವ್ಯ. ನಮಗೆ ನೇರವಾಗಿ ಸಹಾಯ ಮಾಡುವ ಸಾಮರ್ಥ್ಯ ಇಲ್ಲವಾದರೆ ಕೊನೆಪಕ್ಷ ಸಹಾಯ ಸಿಗುವ ದಾರಿಯನ್ನಾದರೂ ತೋರಿಸಬಹುದಲ್ಲವೇ? ಬೇಡುವ ಕೈಗಳಿರುವಂತೆ ನೀಡುವ ಕೈಗಳೂ ಇದ್ದೇ ಇರುತ್ತವೆ.

ಹತ್ತನೇ ತರಗತಿ ಪೂರ್ಣಗೊಳಿಸಿರುವ 80%ಗಿಂತ ಹೆಚ್ಚು ಅಂಕ ಗಳಿಸಿರುವ ಬಡ ವಿದ್ಯಾರ್ಥಿಗಳು ನಿಮ್ಮ ಕಣ್ಣಿಗೆ ಬಿದ್ದರೆ ದಯವಿಟ್ಟು ಅವರಿಗೆ ಈ ವಿಳಾಸ ಕೊಡಿ. ಇನ್‌ಫೋಸಿಸಿ‌ ಫೌಂಡೇಷನ್‌ ಪೋಷಣೆಯಲ್ಲಿರುವ ಪ್ರೇರಣಾ ಎಂಬ ಎನ್‌ಜಿಓ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡಲು ಮುಂದಾಗಿದೆ. ಇದು ನೆರವಿಗಾಗಿ ಬರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರೀಕ್ಷೆ ಏರ್ಪಡಿಸಿ, ಅದರಲ್ಲಿ ನಿಗದಿತ ಅಂಕ ಗಳಿಸಿದವರ ಮುಂದಿನ ವಿದ್ಯಾಭ್ಯಾಸಕ್ಕೆ ಹಣಕಾಸಿನ ಸಹಾಯ ಒದಗಿಸುತ್ತದೆ.

ಸಂಪರ್ಕಿಸಬೇಕಾದ ವ್ಯಕ್ತಿ: ಸುಧಾಕರ್‌
ವಿಳಾಸ:
ಪ್ರೇರಣಾ ಎನ್‌ಜಿಓ
ನಂ 580, 44ನೇ ಅಡ್ಡರಸ್ತೆ, 1ನೇ 'A' ಮುಖ್ಯ ರಸ್ತೆ,
ಜಯನಗರ 7ನೇ ಬ್ಲಾಕ್ ಬೆಂಗಳೂರು,
ಮೊಬೈಲ್‌ ಸಂಖ್ಯೆಗಳು:
ಸರಸ್ವತಿ - 9900906338
ಶಿವಕುಮಾರ್‌ - 9986630301 - ಹನುಮಂತನಗರ ಕಚೇರಿ,
ಬಿಂದು - 9964534667 - ಯಶವಂತಪುರ ಕಚೇರಿ

ಇದನ್ನು ಇ-ಮೇಲ್‌ ಮೂಲಕವೂ ನಿಮ್ಮ ಸ್ನೇಹಿತರಿಗೆ ಕಳಿಸಿ.

ಮೈಕ್ರೋಸಾಫ್ಟ್‌ನಿಂದ ಭಾರತೀಯ ಭಾಷೆಗಳ ಸಾಫ್ಟ್‌ವೇರ್‌


ಮೈಕ್ರೋಸಾಫ್ಟ್‌ ಇಂಡಿಯಾ ಡೆವೊಲಪ್‌ಮೆಂಟ್‌ ಸೆಂಟರ್‌ (MSIDC) ಭಾರತೀಯ ಭಾಷೆಗಳನ್ನು ಲಿಪ್ಯಂತರ (ಒಂದು ಭಾಷೆಯನ್ನು ಮತ್ತೊಂದು ಭಾಷೆಯ ಲಿಪಿಗೆ ಪರಿವರ್ತಿಸುವುದು) ಮಾಡುವ ಸಾಫ್ಟ್‌ವೇರ್‌ ಬಿಡುಗಡೆಗೆ ಸಿದ್ಧವಾಗಿದೆ. ಇಂಗ್ಷಿಷ್‌ ಕೀ ಬೋರ್ಡ್‌ನಿಂದಲೇ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಬರೆಯಲು ಈ ಸಾಫ್ಟ್‌ವೇರ್‌ ಅವಕಾಶ ನೀಡಲಿದೆ. ಈ ಸಾಫ್ಟ್‌ವೇರ್‌ನ ಬೀಟಾ ಆವೃತ್ತಿ ಆರಂಭದಲ್ಲಿ ಉಚಿತವಾಗಿ ಲಭ್ಯವಾಗಲಿದ್ದು, ಕನ್ನಡ, ತೆಲುಗು, ಹಿಂದಿ, ತಮಿಳು, ಬಂಗಾಳಿ ಮತ್ತು ಮಲಯಾಳಂ ಭಾಷೆಗಳಲ್ಲಿ ದೊರೆಯಲಿದೆ. ಈ ಸಾಪ್ಟ್‌ವೇರ್‌ ಬಳಸಿಕೊಂಡು ಮೈಕ್ರೋಸಾಫ್ಟ್‌ನಲ್ಲಿ ರನ್‌ ಆಗುವ ಯಾವುದೇ ಅ‌ಪ್ಲಿಕೇಶನ್‌ಲ್ಲಿ ಭಾರತೀಯ ಭಾಷೆಗಳಲ್ಲಿ ಟೈಪ್‌ ಮಾಡಬಹುದು.

ಈ ನಡುವೆ ವಿಂಡೋಸ್‌ ಓಎಸ್‌ನ ಇತ್ತೀಚಿನ ಆವತ್ತಿ ವಿಂಡೋಸ್‌ 7 ಇತರೆ ಭಾರತೀಯ ಭಾಷೆಗಳಲ್ಲೂ ಲಭ್ಯವಾಗುವ ಸುದ್ದಿ ಬಂದಿದೆ. ಅಂತೂ ಕಂಪ್ಯೂಟರ್‌ ಕ್ಷೇತ್ರದಲ್ಲಿ ಐಟಿ ದೈತ್ಯ ಕಂಪನಿಗಳಿಂದ ಭಾರತೀಯ ಭಾಷೆಗಳಿಗೂ ಮಹತ್ವ ದೊರೆಯುತ್ತಿರುವುದು ಸಂತೋಷದ ವಿಚಾರ.

Friday, November 13, 2009

Google Chrome OS to Be Launched Next Week?


Google's most hotly anticipated project, the brand-new, web-based operating system Chrome OS, is about to become a reality if rumors about its impending launch as soon as next week turn out to be true. When it first announced the project, Google said that the first public release should come this fall so this wouldn't be too much of a surprise. There's not much info aside from the fact that it will be launched and, in fact, any type of details about Chrome OS have been scarce so far, so there's plenty of anticipation in the tech crowd to see just what Google cooked up.


The rumor comes from the TechCrunch blog which has been on somewhat of a roll lately with rumors about Google. Adding the fact that we already knew that Chrome OS would hit at around this date, this rumor seems solid enough. But don't get your hopes up yet, just because Google is launching the OS doesn't exactly mean that you'll be able to pop it into any computer or laptop and run it. It's likely that it's at a pretty unpolished state and Google previously said that Chrome OS wouldn't be ready for the market at least until the second half of 2010.

Hardware support is one of the biggest issues at this point. Chrome OS is based on the Linux kernel so, in theory, at the low level, it should have some very good driver support. It's unclear though what kind of changes Google has made and how far along the other components of the OS are to take advantage of the hardware capabilities. Google is building Chrome OS with netbooks in mind, so chances are that some of the more popular machines like Asus' Eee PC will probably work right off the bat.

But even if you can install it and run it, it doesn't mean that there will be much to look at. From a user's view point, Chrome OS will most likely be very lacking at this point. This release is meant to get developers familiar with the platform and give hardware manufacturers enough time to get used to it, before presumably starting to ship machines with Chrome OS. Anyway, even so there's plenty to be excited about, we'll finally get a look at the mysterious GUI Google has been working on and see how the company has adapted the more system-oriented tasks to an OS designed for the cloud. There have been some clues already, but the speculation should end soon enough.

Sunday, November 8, 2009

Free Running 2009

http://kannadaloka.ning.com/groups/group/new

Sunday, November 1, 2009


ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕಾಮನಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು

ಕನ್ನಡ ಕನ್ನಡ ಹಾ ಸವಿಗನ್ನಡ
ಬಾಳುವುದೇತಕೆ ನುಡಿ ಎಲೆ ಜೀವ
ಸಿರಿಗನ್ನಡದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ
ಕನ್ನಡ ತಾಯಿಯ ಸೇವೆಯ ಮಾಡೆ..
-ಕುವೆಂಪು

Monday, October 26, 2009

ಮಾಧ್ಯಮಗಳೂ ಮೋಸ ಮಾಡ್ತವಾ???

ಮಾಧ್ಯಮಗಳೂ ಮೋಸ ಮಾಡ್ತವಾ??? ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಬಹುಷಃ ಇದು ಸಕಾಲ. ಟಿವಿ, ಪತ್ರಿಕೆಗಳು ಹಠಕ್ಕೆ ಬಿದ್ದಿರುವಂತೆಮಾಧ್ಯಮ ತತ್ವಗಳನ್ನು ಗಾಳಿಗೆ ತೂರುತ್ತಿರುವ ಸಂದರ್ಭದಲ್ಲಿ ಇದು ಪ್ರಸ್ತುತ ಪ್ರಶ್ನೆ. ಇದೇ ಥೀಮ್ ಹಿಡಿದು ಹುಡುಕಾಟಕ್ಕೆ ಹೊರಟರೆ ಉತ್ತರಹೌದುಎಂದೇ ಆಗಿರುತ್ತದೆ. ಈಗಿನ ರಿಯಾಲಿಟಿ ಷೋಗಳನ್ನು, ’ಭಯಾನಕ, ವಿಸ್ಮಯ, ನಿಗೂಢ, ಹಾಗೂ ಅಗೋಚರ...’ ಎಂದು ಜನರನ್ನು ಕುರಿಮಂದೆಯಂತೆ ಮರುಳು ಮಾಡುತ್ತಿರುವ ಕಾರ್ಯಕ್ರಮಗಳನ್ನು ನೋಡಿದರೆ ಪ್ರಶ್ನೆಗೆ ಸೂಕ್ತ ಸಾಕ್ಷ್ಯಗಳು ದೊರೆಯುತ್ತವೆ. ಅಷ್ಟಕ್ಕೂ ಪ್ರಶ್ನೆ ಈಗ ಹುಟ್ಟಿದ್ದಾದರೂ ಯಾಕೆ? ಇತ್ತೀಚೆಗೆ ಬಿಡುಗಡೆಯಾದ, ಯೋಗರಾಜಭಟ್ನಿರ್ದೇಶಿಸಿ, ಜಯಂತ ಕಾಯ್ಕಿಣಿ ಸಾಹಿತ್ಯ ಬರೆದು, ಮನೊಮೂರ್ತಿ ಸಂಗೀತ ಒದಗಿಸಿರುವಮನಸಾರೆಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಬಂದ ರಿವ್ಯೂ ನೋಡಿ, ಚಿತ್ರ ವೀಕ್ಷಿಸಿ ಬಂದರೆ ಇದು ಕೇವಲ ಪ್ರಶ್ನೆ ಮಾತ್ರ ಅಲ್ಲ ಹೊತ್ತಿನ ಜರೂರು ಎಂದು ಪ್ರಜ್ಞಾವಂತರ್ಯಾರಿಗಾದರೂ ಅನಿಸದೆ ಇರುವುದಿಲ್ಲ.

ಮನಸಾರೆಎಂಬ ಹುಚ್ಚರ ಚಿತ್ರಕ್ಕೆ ಬಹುತೇಕ ಮುದ್ರಣ, ದೃಶ್ಯ ಮತ್ತು ಇತ್ತೀಚಿನ ಇಂಟರ್ನೆಟ್ಮಾಧ್ಯಮಗಳು ಭಾರಿ ಪ್ರಚಾರ ನೀಡಿದವು; ಇನ್ನಿಲ್ಲದಂತೆ ಬರೆದವು. ಇದೊಂದು ಪ್ರೇಮಕಾವ್ಯ, ಚೆಂದದ ನಿರೂಪಣೆ, ಘಟನಾನುಘಟಿಗಳ ಮಹಾ ಸಂಯೋಜನೆ ಎಂದೆಲ್ಲ ಹೊಗಳಿದವು. ಯಾವ ಆಧಾರದ ಮೇಲೆ ವಿಮರ್ಶೆ ಬರೆದವು ಎನ್ನುವುದೇ ಈಗನ ಪ್ರಶ್ನೆ. ಅಲ್ಲದೆ ಎಲ್ಲ ಮಾಧ್ಯಮದಲ್ಲೂ ಮನಸಾರೆ ಚಿತ್ರದ್ದೇ ಮಾತು. ಚಿತ್ರ ಬಿಡುಗಡೆಯಾದ ಮೊದಲ ವಾರ ಎಲ್ಲವೂ ಮನಸಾರೆಮಯವಾಗಿತ್ತು.
ಒಂದಷ್ಟೂ ಸ್ಪಷ್ಟ, ಹಣದ ವ್ಯಾಮೋಹಕ್ಕೆ ಬಿದ್ದಿರುವ ಮಾಧ್ಯಮಗಳು ನಾಗರಿಕರನ್ನು ವಂಚಿಸುತ್ತಿವೆ. ಎಷ್ಟೊ ಜನರು ಮಾಧ್ಯಮಗಳಲ್ಲಿ ಬಂದಿರುವ ಚಿತ್ರ ವಿಮರ್ಶೆ ನೋಡಿಕೊಂಡೇ ಥಿಯೇಟ್ಗೆ ಕಾಲಿಡುವ ಮನಸ್ಸು ಮಾಡುತ್ತಾರೆ. ಇತ್ತ ಮಾಧ್ಯಮಗಳೇ ಕೆಟ್ಟ ಚಿತ್ರವೊಂದನ್ನು ಹೊಗಳಿ ಅಟ್ಟಕ್ಕೇರಿಸಿ ಜನರನ್ನು ತಪ್ಪು ದಾರಿಗೆ ಎಳೆದರೆ????

ಇದು ಬೇಲಿಯೇ ಎದ್ದು ಹೊಲ ಮೇದ ಕತೆಯಾಗಿದೆ. ಮಾದ್ಯಮಗಳು ಇಂದು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತಿವೆ. ಇಂದು ಹಣಕೊಟ್ಟು ಬರೆಸುವ ಪ್ರಾಯೋಜಿತ ಬರಹಗಳು ಸಾಮಾನ್ಯವಾಗಿವೆ. ಜನ ಮಾಧ್ಯಮಗಳ ಮಾತನ್ನು ವೇದವಾಕ್ಯ ಎಂದು ನಂಬುತ್ತಾರೆ. ಜನರ ನಂಬಿಕೆಯನ್ನೇ ದೌರ್ಬಲ್ಯ ಎಂದು ಭಾವಿಸಿ ಮಾಧ್ಯಮಗಳು ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಮಾಧ್ಯಮಗಳ ಸಾಮಾಜಿಕ ಹೊಣೆಗೇಡಿತನದ ಬಗ್ಗೆ ಬರೆಯುತ್ತಾ ಹೋದರೆ.... ಅದೊಂದು ಮುಗಿಯದ ಕಥೆ. ಇದಕ್ಕೆ ಅಂತ್ಯ ಹಾಡಬೇಕು. ಕುರಿತು ವ್ಯಾಪಕ ಚರ್ಚೆ ನಡೆದು ಮಾದ್ಯಮಗಳಿಗೆ ಕಡಿವಾಣ ಹಾಕಬೇಕು. ಈಗಾಗಲೇ ಕಮರ್ಷಿಯಲೈಸ್ಹೆಸರಿನಲ್ಲಿ ಸುದ್ದಿಗಳನ್ನು ಒಂದು ಸರಕಿನಂತೆ ಮಾರಾಟ ಆರಂಭಿಸಿರುವ ಮಾಧ್ಯಮಗಳು ಈಗ ರಿಯಾಲಿಟಿ ಷೋಗಳ ಹೆಸರಲ್ಲಿ ಸಾಮಾಜಿಕ ಮೌಲ್ಯಗಳನ್ನೂ ಮಾರಾಟಕ್ಕಿಟ್ಟಿವೆ. ಮುಂದೆ ಏನಾಗಬಹುದು ನೀವೇ ಯೋಚಿಸಿ...

‘ಮನಸಾರೆ’ ಹೇಳ್ತೀನಿ.. ಇದೊಂದು ಐಲು-ಪೈಲು ಚಿತ್ರ


ಮಾಧ್ಯಮಗಳೆಲ್ಲ ‘ಬೊಬ್ಬೆ ಹೊಡೆದು ಪ್ರೇಕ್ಷಕರನ್ನು ಥಿಯೇಟರ್ ಗಳಿಗೆ ಮುಗಿ ಬೀಳುವಂತೆ ಶತ ಪ್ರಯತ್ನ ಮಾಡುತ್ತಿದ್ದರೆ ಅತ್ತ ಬ್ಲಾಕ್ ಟಿಕೆಟ್ ತಗೊಂಡು ಚಿತ್ರ ನೋಡೋ ವೀಕ್ಷಕರಿಗೆ ತಲೆ ಚಚ್ಚಿಕೊಳ್ಳುವುದೊಂದೆ ಬಾಕಿ...

ಇದು ಭಟ್ಟರ ಬಹು(ಹುಸಿ)ನಿರೀಕ್ಷಿತ ’ಮನಸಾರೆ’ ಚಿತ್ರದ ಒನ್‌ಲೈನ್‌ ನ್ಯೂಸ್‌. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ (ಹುಟ್ಟಿಸುವಂತೆ ಮಾಡಿದ್ದ) ಮನಸಾರೆ ಚಿತ್ರ ತೋಪೇಳುವುದು ಗ್ಯಾರಂಟಿ ಎನಿಸ್ತಿದೆ. ಅಭಿಮಾನಿ ದೇವರುಗಳನ್ನು ಪೀಡಿಸುವ ಯಾವ ಚಿತ್ರವೂ ಅದೇನೆ ಬೊಬ್ಬೆ ಹಾಕಿದರೂ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ. ಇದು ’ಮನಸಾರೆ’ಗೂ ಅನ್ವಯಿಸುತ್ತದೆ.
ಲಾಜಿಕ್‌ ಇಲ್ಲದೆ ಹರಿಯುವ ಸಂಭಾಷಣೆಯ ಝರಿ, ಪೋಲಿ ಪೋಲಿ ಡೈಲಾಗ್‌ಗಳು, ಅನಿವಾರ್ಯತೆಯೇ ಇಲ್ಲದೆ ಧುತ್ತನೆ ಎದುರಾಗುವ ಹಾಡು, ಒಂದು ಆಸ್ಪತ್ರೆಯ ಸುತ್ತ ಚಿತ್ರದ ಬಹುತೇಕ ರೀಲ್‌ ಮುಗಿಸುವ ನಿರ್ದೇಶಕ, ಕಂಬಕ್ಕೆ ಕಟ್ಟಿದ ಎಮ್ಮೆ ಎಳೆದಾಡುವಂತೆ ’ಕಾಮನಬಿಲ್ಲಿನ’ ಸುತ್ತವೇ ವೀಕ್ಷಕರನ್ನು ಎಳೆದಾಡಿಸುವ ಕಥೆ, ಹಿರೋಯಿನ್‌ನ ಕೂದಲು ನೋಡಿಕೊಂಡೆ ಕಾಲ ಕಳೆಯುವ ಹೀರೋ, ಒಂದು ಕಟ್ಟಡವನ್ನು ಎಷ್ಟೆಲ್ಲ ಕೋನಗಳಲ್ಲಿ ತೊರಿಸಲು ಸಾಧ್ಯ ಎಂದು ‌ಪ್ರಯೋಗ ಮಾಡುತ್ತಿರುವ ಕ್ಯಾಮೆರಾಮನ್‌, ಚೆಂದದ ಸಾಹಿತ್ಯವಿದ್ದೂ ಸಂಗೀತದ ಅಬ್ಬರದಲ್ಲಿ ಅದರ ಸವಿಯನ್ನು ಮರೆಮಾಡುವ ಸಂಗೀತ ನಿರ್ದೇಶಕ.... ಇವೆಲ್ಲ ಮನಸಾರೆ ಚಿತ್ರದ ನೆಗೆಟಿವ್‌ ಹೈಲೈಟ್‌ಗಳು.

ಚಿತ್ರಕ್ಕೊಂದು ಚೆಂದದ ಥೀಮ್ ಇದೆ; ಮನೋರೋಗಿಗಳ ಮನದಾಳವನ್ನು ಕೆದಕುವ ಪ್ರಯತ್ನವಿದೆ; ಸಮಾಜದ ಹುಚ್ಚುತನವನ್ನು ಮನಗಾಣಿಸುವ ಒಳನೋಟಗಳಿವೆ; ಹುಚ್ಚಾಸ್ಪತ್ರೆಯ ಹುಚ್ಚಾಟಗಳಿವೆ; ಆದರೆ ಸರಿಯಾಧ ನಿರೂಪಣೆಯಿಲ್ಲ; ಸೋ ಕಾಲ್ಡ್‌ ಡೈರೆಕ್ಟರ್ ಮುಂಗಾರುಮಳೆ ಯೋಗ-ರಾಜ ಭಟ್ಟರು ಅದ್ಯಾಕೋ ನಿರೂಪಣೆಯಲ್ಲಿ ಸೋತಂತೆ ಕಾಣುತ್ತಿದೆ..
ಚಿತ್ರ ಆರಂಭವಾದೊಡನೆ ಶುರುವಾಗುವ “ಪಾ..ರ..ಪಪ್ಪ...ಪ್ಪಾ..ರ” ಹಾಡು ತನ್ನ ರಾಕಿಂಗ್‌ ಶೈಲಿಯ ಸಂಗೀತದೊಂದಿಗೆ ಪಡ್ಡೆ ಹೈಕಳನ್ನು ಕುಣಿಸುತ್ತದೆ; ಸ್ಟುಡಿಯೋ ಸೆಟಪ್‌ ವಿಭಿನ್ನವಾಗಿದೆ. ಒಟ್ಟಿನಲ್ಲಿ ವೀಕ್ಷಕರ ನರನಾಡಿಗಳು ಮಿಡಿಯುವಂಥ ಹಾಡಿನೊಂದಿಗೆ ಆರಂಭವಾಗುವ ಈ ಚಿತ್ರ ಆರಂಭದಲ್ಲೇ ಆಹಾ ಬೊಂಬಾಟ್‌!!! ಅನ್ಸಿದ್ರೆ ಆಶ್ಚರ್ಯವಿಲ್ಲ. ಆದರೆ ಕೆಲವೇ ನಿಮಿಷಗಳಲ್ಲಿ ಅದರ ನಿಜ ಬಂಡವಾಳ ಬಯಲಾಗಿ ಬಿಡುತ್ತೆ.

ಇನ್ನು ಈ ಚಿತ್ರಕ್ಕೆ ಭಟ್ಟರದೇ ಸಂಭಾಷಣೆ. ಅದೇನು ಭಟ್ಟರು ಕುಡಿದ ಅಮಲಿನಲ್ಲಿ ಡೈಲಾಗ್‌ಗಳನ್ನು ಬರೆದರೋ ಏನೋ ಗೊತ್ತಿಲ್ಲ. ಅಂತೂ ತೀರ ಪೋಲಿ ಡೈಲಾಗ್‌ಗಳು ಕುಟುಂಬ ಸದಸ್ಯರೊಡನೆ ಕುಳಿತು ನೋಡುವುವರಿಗೆ ಮುಜುಗರ ಹುಟ್ಟಿಸುವುದಂತೂ ನಿಜ. ಕೆಲವು ಡೈಲಾಗ್‌ಗಳು ಎಲ್ಲೋ ಅಧ್ಯಾತ್ಮಿಕ ಲೆಕ್ಚರ್ ಕೊಡತ್ತಿರುವಂತೆ ಭಾಸವಾಗುತ್ತವೆ. ಯಾವುದೋ ತತ್ವಪದಕಾರರು ಭಟ್ಟರ ಮೈಮೇಲೆ ಬಂದು ಬರೆಸಿದರೋ ಏನೋ ಗೊತ್ತಿಲ್ಲ ಬದುಕಿನ ರಹಸ್ಯಗಳನ್ನು ಬೇಧಿಸುವಂತ ಸಂಭಾಷಣೆಗಳನ್ನು ತೀರ ಸರಳವಾಗಿ ಧಾರವಾಡ ಶೈಲಿಯಲ್ಲಿ ಹೇಳುವುದು ಚೆಂದ ಎನಿಸಿದರೂ ಎಷ್ಟು ಜನರಿಗೆ ಅರ್ಥವಾಗುತ್ತದೆ ಎನ್ನುವುದು ಇಲ್ಲಿನ ಪ್ರಶ್ನೆ.
ಜಯಂತ ಕಾಯ್ಕಿಣಿ ಬರೆದಿರುವ ಚಿತ್ರದ ಹಾಡುಗಳು ಇಂಪಾಗಿವೆ. ಸಾಹಿತ್ಯ ಮನಮುಟ್ಟುವಂತಿದೆ. ಆದರೆ ಸಂಗೀತದ ಅಬ್ಬರದಲ್ಲಿ ಸಾಹಿತ್ಯದ ಸವಿ ಸವಿಯಲು ಆಗುವುದೇ ಇಲ್ಲ. ಯಾಕಂದ್ರೆ ಇದರ ಲಿರಿಕ್ಸ್‌ ಅರ್ಥವೇ ಆಗುವುದಿಲ್ಲ. ಭಾವನೆಗಳನ್ನು ನವಿರಾಗಿ ಹಿಡಿದಿಡುವುದರಲ್ಲಿ ಕಾಯ್ಕಿಣಿ ಪಳಗಿದ ಕೈ ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಅದು ಇಲ್ಲೂ ಸಾಬೀತಾಗಿದೆ. ’ಎಲ್ಲೋ ಮಳೆಯಾಗಿದೆ..’ ಕಾಡುತ್ತೆ. ಇನ್ನು ಮನೋಮೂರ್ತಿಯವರ ಸಂಗೀತ ಮಾಮೂಲಿನಂತೆ ಮಧುರವಾಗಿದೆ. ಆದರೆ ಎಲ್ಲೋ ಹಳೆಯ ಟ್ಯೂನ್‌ಗಳು ಇಲ್ಲಿ ಮರುಕಳಿಸಿವೆ ಎನ್ನಿಸುವುದಂತೂ ಸತ್ಯ. ಹಾಡುಗಳು ಎಲ್ಲೆಂದರಲ್ಲಿ ಧತ್ತೆಂದು ಬರುವುದು ಸ್ವಲ್ಪ ಕಿರಿ ಕಿರಿ ಎನಿಸುತ್ತದೆ. ಎಷ್ಟೋ ಸಂದರ್ಭದಲ್ಲಿ ಹಾಡಿನ ಅಗತ್ಯವೇ ಕಾಣುವುದಿಲ್ಲ. ಛಾಯಾಗ್ರಾಹಕನಿಗೆ ಹೆಚ್ಚಿನ ಕೆಲಸವೇನೂ ಇಲ್ಲ. ಯಾಕೆ ಅಂದ್ರೆ ಇಡೀ ಚಿತ್ರ ಹುಚ್ಚಾಸ್ಪತ್ತೆಯೊಂದರ ಸುತ್ತವೇ ಗಿರಕಿ ಹೊಡೆಯುತ್ತದೆ. ಹಾಗಾಗಿ ಅವ್ರಿಗೂ ಅದೇ ಕಾಮನಬಿಲ್ಲು ಕಟ್ಟಡವನ್ನು ಪದೇ ಪದೇ ಬೇರೆ ಬೇರೆ ಕೋನಗಳಲ್ಲಿ ತೋರಿಸದೆ ವಿಧಿಯಿಲ್ಲ. ವೀಕ್ಷಕರಿಗೆ ನೋಡದೆ ವಿಧಿಯಿಲ್ಲ.

ನಟನೆಯ ವಿಷಯಕ್ಕೆ ಬಂದರೆ ಮಾಗಿದ ನಟನೆ ಎಲ್ಲೂ ಕಂಡುಬರುವುದಿಲ್ಲ. ಇತ್ತೀಚೆಗಷ್ಟೆ ನಾಯಕನಟನಾಗಿರುವ ದಿಗಂತ್‌ ಹೆಚ್ಚು ಲವಲವಿಕೆಯಿಂದ ನಟಿಸಿದ್ದಾರೆ. ಡೈಲಾಗ್‌ ಡಿಲಿವರಿಯಲ್ಲಿ ಸರಾಗವಿದೆ. ಆದರೆ ಗಣೇಶನ ಮುಂಗಾರಮಳೆ ಸ್ಟೈಲ್‌ ಕಾಪಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಡೈಲಾಗ್‌ ಹೇಳುವ ಶೈಲಿಯೇ ಬಹಿರಂಗ ಪಡಿಸುತ್ತದೆ. ಆದರೆ ಡೈಲಾಗ್‌ ಹೇಳುವ ಸ್ಪೀಡ್‌ ಜಾಸ್ತಿಯಾಗಿದೆ. ಒಂದು ಡೈಲಾಗ್‌ ಅನ್ನು ಸವಿಯುವ ಮುನ್ನವೇ ಪೌರಾಣಿಕ ಚಿತ್ರದಲ್ಲಿ ಬರುವ ಸರಳುಗಳ ಸರಣಿಯಂತೆ ನುಗ್ಗಿ ಬರುವ ಡೈಲಾಗ್‌ಗಳು ಅದರ ಸವಿಯನ್ನು ವೀಕ್ಷಕರಿಗೆ ತಟ್ಟುವುದೇ ಇಲ್ಲ. ಆಂದ್ರಿತಾ ರೇ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ಹಾಡನಲ್ಲಂತೂ ಸ್ವಲ್ಪ ಜಾಸ್ತಿನೇ ಎಕ್ಸ್ಪೋಸ್‌ ಆಗಿದ್ದಾರೆ. ನೋಡುಗರ ಮೈ ಬಿಸಿ ಏರುತ್ತದೆ. ಗಂಡಸರನ್ನು ಅತಿಯಾಗಿ ದ್ವೇಷಿಸುವ ಇವರು ಸಿಕ್ಕವರನ್ನೆಲ್ಲಾ ಚಾಕುವಿನಿಂದ ಚುಚ್ಚಲು ಹೋಗಿ ಸ್ವಲ್ಪ ಹೊತ್ತಿನ ನಂತರ ’ಸಾರಿ..ಸಾರಿ’ ಎಂದು ಅಳುವ ಅವರ ಅಮಾಯಕತೆ ಅಯ್ಯೋ ಎನಿಸುತ್ತದೆ. ಹುಬ್ಬಳ್ಳಿಯಂವ ಶಂಕರಣ್ಣ ತನ್ನ ಅಪ್ಪಟ ಉತ್ತರ ಕರ್ನಾಟಕ ಶೈಲಿಯಿಂದ ಬೇಸತ್ತ ಮುಖಗಳಲ್ಲಿ ನಗೆಯ ಸಿಂಚನ ಮೂಡಿಸುತ್ತಾರೆ. ಹುಚ್ಚಾಸ್ಪತ್ರೆಯಲ್ಲಿ ಬರುವ ಕೆಲವು ವಿಚಿತ್ರ ಪಾತ್ರಗಳು ಎಂದರೆ, ಎಸ್ಕೇಪ್‌ ರಾಜನ ಎಸ್ಕೇಪ್‌ ಐಡಿಯಾ, ಒಬ್ಬ ಹುಚ್ಚನ ’ನಂಗೆ ಬಟ್ಟೆ ಬೇಡಾ.. ’ ಎಂದು ಕಿರುಚುವ ಡೈಲಾಗ್ ಚಿತ್ರದುದ್ದಕ್ಕೂ ರಿಪೀಟ್‌ ಆಗಿದ್ದರೂ ಬೋರು ಎನಿಸುವುದಿಲ್ಲ. ಅಲ್ಲದೆ ಚಿತ್ರಕ್ಕೆ ಲವಲವಿಕೆ ತಂದು ಕೊಟ್ಟಿವೆ. ಬೀದಿಯಲ್ಲಿ ವಿದ್ಯುತ್‌ ತಯಾರಿಸುವ ಹೊಸ ಐಡಿಯಾ ಚೆನ್ನಾಗಿದೆ.

ಒಂದಿಷ್ಟು ಕಥೆಯ ಹೂರಣ...

ಮದುವೆ ಪಂಕ್ಷನ್‌ನಲ್ಲಿ ಹೀರೋ ’ಜೀವನ ಪಾಠ’ದ ಪ್ರವಚನದೊಂದಿಕೆ ಆರಂಭವಾಗುವ ಕಥೆ ಇದ್ದಕ್ಕಿದ್ದಂತೆ ಎಲ್ಲೆಲ್ಲೂ ಹರಿಯುತ್ತದೆ.ಏನಾಯ್ತು? ಯಾಕಾಯ್ತು? ಎಂದು ವೀಕ್ಷಕರು ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ಮತ್ತೇನೋ ಆಗಿಬಿಟ್ಟಿರುತ್ತದೆ. ಸಿನಿಮೀಯ ನಿಯಮದಂತೆ ಅಚಾನಕ್ಕಾಗಿ ಹೀರೋ (ದಿಗಂತ್‌) ದಟ್ಟ ಕಾಡಿನ ಮಧ್ಯೆ ಇರುವ ಮಾನಸಿಕ ಚಿಕಿತ್ಸಾ ಕೇಂದ್ರವೊಂದರ ಅತಿಥಿಯಾಗ್ತಾನೆ. ಅಲ್ಲಿ ಅವನೊಂದಿಗೆ ಒಂದಷ್ಟು ಹರಟೆ ಹೊಡೆಯಲು ಕೆಲವು ಸಹ-ಹುಚ್ಚರು, ಇನ್ನೇನು ಹೇಗೋ ಅಲ್ಲಿಂದ ಎಸ್ಕೇಪ್‌ ಆಗ್ಬೇಕು... ಅಲ್ಲಿ ಒಬ್ಬಳು ಸುಂದರ ಹುಚ್ಚಿ ಐ ಮೀನ್‌ ಹೀರೋಯಿನ್‌ (ಆಂದ್ರಿತಾ ರೇ), ಯಥಾಪ್ರಕಾರ ಅವಳು ಹೀರೋ ಕಣ್ಣಿಗೆ ಬೀಳುತ್ತಾಳೆ. ಅವಳ ಮೋಹಕ ಹೆರಳಿಗೆ ಮರುಳಾದ ಹೀರೋ ’ಹಾಳಾಗಿ’ ಹೋಗ್ತಾನೆ. ಅಲ್ಲಿಗೆ ಶುರು ಅವನ ಪ್ರೇಮ ಪರಸಂಗ.

ಚಿತ್ರ ಆರಂಭದಲ್ಲಿ ಹಿರೋ ಜೀವನ, ಮದುವೆ, ಹೆಂಡತಿ, ಪ್ರೀತಿ... ಮುಂತಾಗಿ ಕೊಡುವ ಲೆಕ್ಚರ್ ಸತ್ಯ ಎನಿಸಿದರೂ ತೀರಾ ಉಡಾಫೆಯಾಗಿದೆ. ಚಿತ್ರದ ಬಹುತೇಕ ಕತೆ ಕಾಡಿನ ಮಧ್ಯೆ ಇರುವ ಹುಚ್ಚರ ಸಂತೆಯಲ್ಲೇ ಗಿರಕಿ ಹೊಡೆಯುತ್ತದೆ. ಇದರೊಂದಿಗೆ ನೋಡುಗರ ತಲೆಯನ್ನೂ ಗಿರಕಿ ಹೊಡೆಸುತ್ತದೆ. ಇದರಿಂದ ಬಿಡುಗಡೆ ಸಿಕ್ಕರೆ ಸಾಕು ಎಂದು ವೀಕ್ಷಕ ಅಂದುಕೊಳ್ಳುತ್ತಿರುವಾಗಲೇ ನಾಯಕ ನಾಯಕಿಯನ್ನು ಅಲ್ಲಿಂದ ಎಸ್ಕೇಪ್‌ ಮಾಡಿಕೊಂಡು ಬರುತ್ತಾನೆ. ನೋಡುಗರಿಗೆ ಏನೋ ಒಂದು ರೀತಿಯ ಸಮಾಧಾನ. ಅಂತೂ ಕಥೆ ಈಗಲಾದರೂ ಮತ್ತೊಂದು ಮಗ್ಗುಲಿಗೆ ಹೊರಳಿತಲ್ಲ ಎಂದು. ಹೀರೋಯಿನ್‌ ಹೇಳಿದ ಕಡೆಯೆಲ್ಲ 105ಆಂಬುಲೆನ್ಸ್‌ ಓಡಿಸುವ ನಾಯಕ ಕೊನೆಗೆ ಡೀಸೆಲ್‌ ಮುಗಿದಾಗ ಅದನ್ನು ಅಲ್ಲೆಲ್ಲೋ ಬಿಟ್ಟು ಫ್ಲಾಶ್‌ಬ್ಯಾಕ್‌ ಹಿಡಿದು ಹೊರಡುತ್ತಾರೆ. ಆಂಧ್ರಿತ ತನ್ನ ಪಾಳು ಮನೆಗೆ ಹೋಗಿ ಅಲ್ಲಿ ಅಪ್ಪ-ಅಮ್ಮನ ಜಗಳ, ತಂದೆಯ ಕ್ರೌರ್ಯವನ್ನು ನೆನಪಿಸಿಕೊಳ್ಳುವ ದೃಶ್ಯಗಳು ಭಾವನೆಗಳನ್ನು ಕೆದಕುತ್ತವೆ. ಇಲ್ಲಿಂದ ಮುಂದೆ ನಿರ್ಜನ ರಸ್ತೆಯಲ್ಲಿ ಹುಡುಗರ ಪ್ರೇಮ ಪುರಾಣದ ಕುರಿತು ಹೀರೋನ ತಡೆಯಿಲ್ಲದ ವಾಗ್ಝರಿ ಕೆಳಲು ಇಷ್ಟವಾಗುತ್ತವೆ (ನನ್ನಂಥ ಬಿಸಿರಕ್ತದ ಯುವಕರಿಗೆ). ಇಲ್ಲಿ ವೀಕ್ಷಕರ ಮಹಾಪ್ರಭುಗಳ ಊಹೆಗಳು ಗರಿಗೆದರುತ್ತವೆ. ಇಬ್ಬರೂ ಕಾಡಿನಲ್ಲಿ ಅಲೆಯುತ್ತಾ ತಿರುಗುತ್ತಾರೆ. ಏಕಾಂತ ಕಾಡಿನಲ್ಲಿ ಒಂದಷ್ಟು ರೊಮ್ಯಾಂಟಿಕ್ ಕ್ಷಣಗಳನ್ನು ಸವಿಯಬಹುದು, ಕೆಲವು ಮಧುರವಾಧ ’ಲವ್‌’ಲಿ ಮಾತುಗಳನ್ನು ಕೇಳಬಹುದು, ಕಾಡಿನ ಏಕಾಂತತೆಯಲ್ಲಿ ಆ ಹುಚ್ಚರ ಪ್ರೀತಿಯ ಆಪ್ತ ಅಪ್ಪುಗೆಯನ್ನು ಸವಿಯಬಹುದು,.. ಇನ್ನು ಏನೇನೋ ಊಹೆಗಳು ನೆಲೆಸಿಬಿಡುತ್ತವೆ. ನಾಯಕಿಯಂತೂ ’ನಡಿ ಆಸ್ಪತ್ರೆಗೆ ಹೋಗೋಣ’ ಎಂದು ದುಂಬಾಲು ಬಿದ್ದು ’ಕಾಮನಬಿಲ್ಲಿ’ನ (ಹುಚ್ಚಾಸ್ಪತ್ರೆ) ಅಂಚಿಗೂ ಬಂದು ಬಿಡುತ್ತಾಳೆ. ನಾಯಕ ’ಬೇಡ ಬನ್ರಿ ಹೋಗೋಣ’ ಎಂದು ಗೋಗರೆಯುತ್ತಿರುತ್ತಾನೆ.

ಇಲ್ಲಿ ಹೀರೋಯಿನ್‌ ಮನಸ್ಸು ಬದಲಾಯಿತು.. ಇಬ್ಬರೂ ಗೂಡಿನಿಂದಾರಿತ ಸ್ವಚ್ಛಂದ ಪಕ್ಷಿಗಳಾಗುತ್ತಾರೆ ಎಂದು ಎಲ್ಲ ಕಣ್ಣುಗಳು ಕಾತರದಿಂದ ಕಾಯುತ್ತಿರುತ್ತವೆ. ಆಗ.... ಅವಳು ಮತ್ತೆ ಅದೇ ಹುಚ್ಚರ ಸಂತೆಗೇ ಹೊರಟೇ ಹೊಗುತ್ತಾಳೆ. ಇಲ್ಲಿಗೆ ಚಿತ್ರದ ಬಗ್ಗೆ ವೀಕ್ಷಕರ ನಿರೀಕ್ಷೆ ನಿಂತುಬಿಡುತ್ತದೆ. ತಾಳ್ಮೆ ಪಾದದಡಿಗೆ ಸಿಲುಕಿ ಭಟ್ಟರ ಬೈಗುಳ ಆರಂಭವಾಗುತ್ತವೆ. ವೀಕ್ಷಕರೆ ಕಲ್ಪನೆಗೆ ವಿರುದ್ಧವಾಗಿ, ಅನಿರೀಕ್ಷಿತವಾಗಿ ನಡೆಯುವುದೇ ಚಿತ್ರದ ಹಗ್ಗಳಿಕೆಯೇ? ಕೆಲವು ಸಿದ್ಧ ಮಾದರಿಗಳನ್ನು ಮುರಿಯಬಾರದು. ಅದನ್ನು ವೀಕ್ಷಕರು ಅಷ್ಟು ಒಪ್ಪಿಕೊಳ್ಳುವುದಿಲ್ಲ ಎನ್ನುವ ಸತ್ಯ ಭಟ್ಟರಿಗೆ ಗೊತಿಲ್ಲ ಎನಿಸುತ್ತದೆ.

Tuesday, October 20, 2009

Artificial Retina Can Restore Sight to the Blind


An artificial retina could restore sight to the blind, according to new research from the Massachusetts Institute of Technology.

The device can be plugged directly into the optic nerve and is based on widely used cochlear implants.

The artificial retina is designed to help people with advanced macular degeneration or retinitis pigmentosa, progressive diseases that permanently blind patients, usually older patients.

Some drugs can delay the process, but once the cells that detect light (rods) and color (cones) die, they are gone.

The nerves behind the rods and cones do survive, however. For a patient to see again, something needs to stimulate the nerves. A mild electrical charge, applied using a self-contained, surgically implanted device could stimulate the optical nerves and allow a person to see again.

Saturday, October 17, 2009

ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?


ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ? ಇದು ಕಂಪ್ಯೂಟರ್‌ ಬಳುಸವ ಬಹುತೇಕ ಕನ್ನಡಿಗರ ಬಹುದೊಡ್ಡ ಪ್ರಶ್ನೆ.

ಕನ್ನಡದಲ್ಲಿ ಮೇಲ್ ಕಳಿಸುವ ಅವಕಾಶ ಇದ್ದಿದ್ದರೆ ಎಷ್ಟು ಚೆನ್ನ ಇತ್ತು? ಚಾಟ್ ಮಾಡುವಾಗ ಕನ್ನಡದಲ್ಲೂ ಒಂದಷ್ಟು ಡೈಲಾಗ್‌ ಹೊಡೆಯುವಂತಿದ್ದರೆ.... ಆಹಾ!!! ? ಫೈಲ್‌ ಮತ್ತು ಪೋಲ್ಡರ್‌ಗಳನ್ನು ನಮ್ಮದೇ ಭಾಷೆಯಲ್ಲಿ ಸೇವ್‌ ಮಾಡುವ ಅವಕಾಶ ಇದ್ದಿದ್ದರೆ? ಬ್ಗಾಗ್‌ಗಳಲ್ಲಿ ಅರ್ಥವಾಗದೆ ಅವಾಂತರ ಸೃಷ್ಟಿಸುವ inglish kannadavannu (ಇಂಗ್ಲೀಷ್‌ ಕನ್ನಡದಲ್ಲಿ nanu nimma abhimani- ಇದನ್ನು ನನು ನಿಮ್ಮ ಅಭಿಮನಿ , paipoti tevravagi nadiyuttide- ಪಾಯ್‌ಪೊಟಿ ತೆವ್ರವಗಿ ನದಿಯುಟ್ಟಿದೆ ಎಂದೂ ಓದಬಹುದು ಇದರ ಸರಿಯಾಧ ಅರ್ಥ ಪೈಪೋಟಿ ತೀವ್ರವಾಗಿ ನಡೆಯುತ್ತಿದೆ ಎಂದು. ಇದರ ಅವಾಂತರಗಳು ಒಂದಲ್ಲ ಎರಡಲ್ಲ.. ) ಬಿಟ್ಟು ಕನ್ನಡದಲ್ಲೇ ಕಾಮೆಂಟ್‌ ಬರೆಯುವಂತಿದ್ದರೆ? ಎಂಎಸ್‌ ವರ್ಡ್‌, ಎಕ್ಸೆಲ್‌, ಪವರ್‌ಪಾಯಿಂಟ್‌ನಲ್ಲಿ ಕನ್ನಡದಲ್ಲೇ ಲೆಟರ್‌, ಪ್ರೆಸೆಂಟೇಷನ್‌, ಚಾರ್ಟ್‌ ಎಲ್ಲವನ್ನೂ ತಯಾರಿಸುವ ಹಾಗಿದ್ದರೆ? ನಿಮ್ಮ ಇಂಥ ಹತ್ತಾರು ಪ್ರಶ್ನಗಳಿಗೆ ಈ ಲೇಖನ ಉತ್ತರ ಒದಗಿಸುತ್ತದೆ.

ಕಂಪ್ಯೂಟರ್‌ನಲ್ಲಿ ಕನ್ನಡ ಟೈಪ್‌ ಮಾಡಲು ಎರಡು ವಿಧಾನಗಳಿವೆ. ಅವು ಮೂಲಭೂತವಾಗಿ ಒಂದು ANSI ಮತ್ತೊಂದು UNICODE ಮಾದರಿಯವು. ನಮ್ಮ ಬರಹ, (ಬರಹ ಈಗ ಯೂನಿಕೋಡ್‌ನಲ್ಲೂ ಲಭ್ಯವಿದೆ) ನುಡಿ ಮತ್ತು ಶ್ರೀಲಿಪಿ ಇವೆಲ್ಲ ANSI ಪಾರ್ಮ್ಯಾಟ್‌ನಲ್ಲಿವೆ. ಈ ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು ಕನ್ನಡ ಟೈಪ್‌ ಮಾಡಬಹುದು. ಆದರೆ ಅದೇ ಕನ್ನಡ ಪಠ್ಯವನ್ನು ಬೇರೊಂದು ಕಂಪ್ಯೂಟರ್‌ನಲ್ಲಿ ನೋಡಬೇಕೆಂದರೆ ಅಲ್ಲೂ ಅದೇ ಸಾಫ್ಟ್‌ವೇರ್‌ ಅಥವ ಕನ್ನಡ ಫಾಂಟ್‌ ಸಪೂರ್ಟ್ ಇರಬೇಕು. ಇದು ANSI ಫಾಮ್ಯಾಟ್‌ನ ಬಹುದೊಡ್ಡ ನ್ಯೂನತೆ. ಮತ್ತೊಂದು ವಿಧಾನ ಯೂನಿಕೋಡ್ ‌(ಯೂನಿಕೋಡ್‌ನಲ್ಲಿ ಕೆಲವು ವ್ಯಂಜನಗಳೊಂದಿಗೆ ಊ ಸ್ವರ ಮೂಡುವುದಿಲ್ಲ, ಅದಕ್ಕೆ ಇಲ್ಲಿ UNICODE ಅನ್ನು ಯಾನಿಕೋಡ್‌ ಎಂದೇ ಬರೆಯಲು ಸಾಧ್ಯ. ) ಇದು ವಿಶ್ವದ ಕಂಪ್ಯೂಟಿಂಗ್‌ ಇಂಡಸ್ಟ್ರಿ ಸ್ಟಾಂಡರ್ಡ್‌ ಆಗಿರುವುದರಿಂದ ಇಲ್ಲಿ ಆ ಸಮಸ್ಯೆ ಉದ್ಭವಿಸುವುದಿಲ್ಲ. ವಿಂಡೋಸ್‌ನಲ್ಲಿರುವ TUNGA ಫಾಂಟ್‌ ಯೂನಿಕೋಡ್‌ಗೆ ಉದಾಹರಣೆ. ಇಲ್ಲಿ ಟೈಪ್‌ ಮಾಡುವುದಕ್ಕಷ್ಟೆ ಸಾಫ್ಟ್‌ವೇರ್‌ನ ಅಗತ್ಯ ಅದನ್ನು ಕನ್ನಡ ಇಲ್ಲದ ಯಾವುದೇ ಕಂಪ್ಯೂಟರ್‌ನಲ್ಲೂ ವೀಕ್ಷಿಸಬಹುದು. ಇದಕ್ಕೆ ಮಾಡಬೇಕಿರುವುದು ಇಷ್ಟೆ, ಇದಕ್ಕೆ ಸಂಬಂಧಪಟ್ಟ ಸಾಫ್ಟ್‌ವೇರ್‌ ಒಂದನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನ ಕಂಟ್ರೋಲ್‌ ಪ್ಯಾನೆಲ್‌ನಲ್ಲಿ ಸೆಟ್ಟಿಂಗ್ಸ್‌‌ನಲ್ಲಿ ಬದಲಾವಣೆ ಮಾಡಬೇಕು ಅಷ್ಟೆ

ಹಾಗಿದ್ದರೆ ಅದನ್ನು ಮಾಡುವುದು ಹೇಗೆ?..... ಮುಂದೆ ಓದಿ

ಕನ್ನಡ ಟೈಪ್‌ ಮಾಡುವ ವಿಧಾನಗಳು:

ಯೂನಿಕೋಡ್ ಆಧರಿಸಿ ಇಂಟರ್ನೆಟ್‌ನಲ್ಲಿ ಕನ್ನಡ ಟೈಪ್ ಮಾಡುವುದು ತೀರಾ ಸುಲಭ. ಕಂಪ್ಯೂಟರಿನಲ್ಲಿ Windows 2003 ಅಥವಾ XP ಇದ್ದರೆ, ಸಾಮಾನ್ಯವಾಗಿ ಕನ್ನಡ ಯೂನಿಕೋಡ್ ಅಕ್ಷರಗಳು ಕಾಣಿಸುತ್ತವೆ. ಆದರೆ, ಎಲ್ಲ ಬ್ರೌಸರುಗಳಲ್ಲಿ ಹಾಗೂ ಸಾಫ್ಟ್ ವೇರುಗಳಲ್ಲಿ ಯೂನಿಕೋಡ್ ಅಕ್ಷರ ಕಾಣಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಕ್ಷರಗಳಿದ್ದ ಜಾಗದಲ್ಲಿ ಅಥವಾ ಕಾಣಿಸಿದರೆ, ಆ ಸಾಫ್ಟ್ ವೇರ್ ಅಥವಾ ಬ್ರೌಸರ್ ಯೂನಿಕೋಡ್ ಅಕ್ಷರಗಳನ್ನು ಬೆಂಬಲಿಸುತ್ತಿಲ್ಲ ಎಂದು ಅರ್ಥ. Windows 95 ಹಾಗೂ 98, ಕನ್ನಡ ಯೂನಿಕೋಡನ್ನು ಬೆಂಬಲಿಸುವುದಿಲ್ಲ.

ಕಂಪ್ಯೂಟರ್‌ನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವ ನಾಲ್ಕು ವಿಧಾನಗಳು:

1. ಬರಹ IME/ಬರಹ ಯೂನಿಕೋಡ್‌ : (Input Method Editor) (ಬರಹ ಯೂನಿಕೋಡ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ)
2. ಬರಹ ಪ್ಯಾಡ್ : (ಬರಹ ಯೂನಿಕೋಡ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ)
3. ಗೂಗಲ್‌ ಟ್ರಾನ್ಸ್‌ಲೇಷನ್‌ ಟೂಲ್‌ಕಿಟ್‌: (ಗೂಗಲ್‌ ಟ್ರಾನ್ಸಲೇಷನ್‌ ಟೂಲ್‌ಕಿಟ್‌ಗೆ ಪ್ರವೇಶ ಮಾಡಲು ಇಲ್ಲಿ ಕ್ಲಿಕ್‌ ಮಾಡಿ, ಇದರ ಸೌಲಭ್ಯ ಪಡೆಯಲು ನೀವು G Mail ಹೊಂದಿರಬೇಕು.)
4. ಕ್ವಿಲ್ ಪ್ಯಾಡ್ ಆನ್ ಲೈನ್: (ಇದನ್ನು ತೆರೆಯಲು ಇಲ್ಲಿ ಕ್ಲಿಕ್ ಮಾಡಿ)


1. ಬರಹ IME : ಬರಹ - ಕನ್ನಡದ ಒಂದು ಸಾಫ್ಟ್ ವೇರ್. ಅಮೇರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ಶೇಷಾದ್ರಿ ವಾಸು ಕನ್ನಡದಲ್ಲಿ ಎನ್ನುವ ಸಾಫ್ಟ್‌ವೇರ್ ರೂಪಿಸಿ ಬಹುತೇಕ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡುವ ಅವಕಾಶ ಕಲ್ಪಿಸಿದರು. ಸರ್ಕಾರದ ಅಧಿಕೃತ ಸಾಫ್ಟ್‌ವೇರ್‌ ನುಡಿಯನ್ನು ಹೊರತುಪಡಿಸಿ ಇದು ಕನ್ನಡಿಗರ ಮೆಚ್ಚಿನ ಕನ್ನಡ ಸಾಫ್ಟ್‌ವೇರ್‌ ಆಗಿದೆ. ಮೊದಲು ANSI ಶಿಷ್ಟಾಚಾರದಲ್ಲಿದ್ದ ಬರಹ ಇದೀಗ UNICODEನಲ್ಲೂ ಲಭ್ಯವಿದೆ.


BarahaIME (ಬರಹದ ರೀತಿಯಲ್ಲಿಯೇ ಕೆಲವ ಮಾಡುವ Indic IME (Kannada)ಯನ್ನು ವೆಬ್‌ದುನಿಯಾದವರು ಅಭಿವೃದ್ಧಿಪಡಿಸಿದ್ದಾರೆ. ಇದು ಭಾಷಾ ಇಂಡಿಯಾ ವೆಬ್‌ಸೈಟ್‌ನಲ್ಲಿ ದೊರೆಯುತ್ತದೆ. ಒಂದು ಅಧ್ಬುತ ಅಪ್ಲಿಕೇಷನ್‌. ಇದನ್ನು ಬಳಸಿಕೊಂಡು ಕಂಪ್ಯೂಟರ್‌ ಅನ್ನು ಪೂರ್ತಿ ಕನ್ನಡಮಯವಾಗಿಸಿಬಿಡಬಹುದು. ಪೈಲ್‌ ಮತ್ತು ಫೋಲ್ಡರ್‌ಗಳನ್ನು ಕನ್ನಡದಲ್ಲಿಯೇ ಸೇವ್ ಮಾಡಬಹುದು. ಹಾರ್ಡ್‌ಡಿಸ್ಕ್ ಡ್ರೈವ್‌ಗಳನ್ನು ಕನ್ನಡದಲ್ಲಿ ರೀನೇಮ್‌ ಮಾಡಬಹುದು, MS Officeನ ( MS Officeನಲ್ಲಿ ಕನ್ನಡ ಬಳಸುವುದು ಹೇಗೆಂಧು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ )ಯಾವುದೇ ಅಪ್ಲಿಕೇಷನ್‌ನಲ್ಲಿ ಸುಲಭವಾಗಿ ಕನ್ನಡ ಟೈ್‌ಪ್‌ ಮಾಡಬಹುದು, ಇಂಟರ್ನೆಟ್‌ನಲ್ಲಿ ಕನ್ನಡ ಟೈಪ್‌ ಮಾಡಬಹುದು, ಎಂದರೆ ಗೂಗಲ್‌ ಸರ್ಚ್‌ ಬಾಕ್ಸ್‌ನಲ್ಲಿ ಕನ್ನಡದಲ್ಲಿ ಟೈಪ್‌ ಮಾಡಿ ನಾವು ಕನ್ನಡದಲ್ಲಿ ಹುಡುಕುತ್ತಿರುವ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಬಹುದು, ಬ್ಲಾಗ್‌ , ಸೋಷಿಯಲ್ ನೆಟವರ್ಕ್ಸ್, ವೆಬ್‌ಸೈಟ್‌ ಮುಂತಾದ ಕಡೆಗಳಲ್ಲಿ ಲೇಖನ ಅಥವಾ ಕಾಮೆಂಗಳನ್ನು ಕನ್ನಡದಲ್ಲೇ ಬರೆಯಬಹುದು, ನಿಮ್ಮ ಯಾವುದೇ ಮೇಲ್ ಬಾಕ್ಸ್‌ನಲ್ಲಿ ಕನ್ನಡದಲ್ಲಿ ಮೇಲ್‌ ಟೈಪ್‌ ಮಾಡಬಹುದು, ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಮೆಸೆಂಜರ್‌ ಆಗಿರಲಿ ಕನ್ನಡದಲ್ಲಿ ಚಾಟ್‌ ಮಾಡಬಹುದು.
ಕಂಪ್ಯೂಟರ್‌ನಲ್ಲಿ Baraha IMEಯನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸೆಟಪ್‌ ಮಾಡುವುದು ಹೇಗೆಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

2. ಬರಹ ಪ್ಯಾಡ್: ಇದು ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯಲು ರೂಪಿಸಿರುವ ಒಂದು ಪುಟ್ಟ ಅಪ್ಲಿಕೇಷನ್‌ ಸಾಫ್ಟ್‌ವೇರ್‌. ಇದು ನೋಟ್‌ಪ್ಯಾಡ್‌ನಂತೆಯೇ ಇದ್ದು ಭಾರತೀಯ ಭಾಷೆಗಳನ್ನು ಯೂನಿಕೋಡ್‌ನಲ್ಲಿ ಬರೆಯಲು ಅನುವು ಮಾಡಿಕೊಡುತ್ತದೆ. ಇದು ಬರಹ ಯೂನಿಕೋಡ್‌ ಸಾಫ್ಟ್‌ವೇರ್ ಜೊತೆಯಲ್ಲೇ ಬರುತ್ತದೆ. ಹೀಗಾಗಿ ನೀವು ಪ್ರತ್ಯೇಕವಾಗಿ ಇನ್‌ಸ್ಟಾಲ್‌ ಮಾಡುವ ಅಗತ್ಯವಿಲ್ಲ. BarahaUnicode 2.0 ಇನ್‌ಸ್ಟಾಲ್‌ ಮಾಡಿಕೊಂಡರೆ BarahaIME ಮತ್ತು BarahaPad ಎರಡರ ಸೌಲಭ್ಯವೂ ದೊರೆಯುತ್ತವೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

3. ಗೂಗಲ್ ಟ್ರಾನ್ಸ್‌ಲೇಷನ್‌ ಟೂಲ್‌ ಕಿಟ್‌ : ಇದು ಇಂಟರ್ನೆಟ್‌ನಲ್ಲಿ ಪೈಲ್‌ಗಳನ್ನು ಕನ್ನಡದಲ್ಲಿ ಅಪ್‌ಡೇಪ್‌ ಮಾಡಲು ಹೇಳಿ ಮಾಡಿಸಿದ ಟೂಲ್‌. GMail ಮೂಲಕ ಲಾಗಿನ್‌ ಆಗಿ ಅಲ್ಲಿರುವ ಗೂಗಲ್‌ ಡಾಕುಮೆಂಟ್ಸ್‌‌ನಲ್ಲಿ ನಿಮ್ಮ ಯಾವುದೇ ಭಾಷೆಯ ಯಾವುದೇ ಫೈಲ್‌ಗಳನ್ನು ಸೇವ್ ಮಾಡಬಹುದು, ನಿಮ್ಮ ರೆಸ್ಯೂಮ್‌, ಲೆಟರ್‌ ಯಾವುದೇ ಇರಲಿ ಅವುಗಳನ್ನು ಈ ಟೂಲ್‌ಕಿಟ್ ಬಳಸಿಕೊಂಡು ಅಲ್ಲಿಯೇ ಕನ್ನಡದಲ್ಲಿ ಎಡಿಟ್‌ ಮಾಡಿ ಆನ್‌ಲೈನ್‌ನಲ್ಲೇ ಸೇವ್ ಮಾಡಬಹುದು. ಈ ಟೂಲ್‌ಕಿಟ್‌ನಲ್ಲಿ ಭಾರತೀಯ ಭಾಷೆಗಳಷ್ಟೇ ಅಲ್ಲ ವಿಶ್ವದ ಹಲವು ಭಾಷೆಗಳ ಸೌಲಭ್ಯವನ್ನು ಗೂಗಲ್‌ ಟ್ರಾನ್ಸ್‌ಲೇಷನ್‌ ಟೂಲ್‌ ಕಿಟ್‌ ನೀಡುತ್ತದೆ.

ಇದರ ಬಗ್ಗೆ ಮತ್ತಷ್ಟು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ


ಗೂಗಲ್ ಟ್ರಾನ್ಸ್‌ಲೇಷನ್‌ ಟೂಲ್‌ ಕಿಟ್‌ ಬಳಸಲು ಇಲ್ಲಿ ಕ್ಲಿಕ್ ಮಾಡಿ.

4. ಕ್ವಿಲ್ ಪ್ಯಾಡ್ ಆನ್ ಲೈನ್ ಕನ್ನಡ ಟೂಲ್ : ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ಬಿಡುಗಡೆ ಆಗುವುದಕ್ಕೂ ಮೊದಲೇ ಬೆಂಗಳೂರಿನ Tachyon Technologies ಕಂಪನಿ ಕ್ವಿಲ್ ಪ್ಯಾಡ್ ಎಂಬ ಆನ್ ಲೈನ್ ಕನ್ನಡ ಟ್ರಾನ್ಲ್ ಲಿಟರೇಶನ್ ಟೂಲ್ ಬಿಡುಗಡೆ ಮಾಡಿತ್ತು. ಈ ಟೂಲನ್ನು ಕೆಲವು ಮೊಬೈಲ್ ಫೋನ್ ಕಂಪನಿಗಳೂ ಹ್ಯಾಂಡ್ ಸೆಟ್ಟಿನಲ್ಲಿ ಅಳವಡಿಸಿವೆ. ಇದನ್ನು ಕೂಡ ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ರೀತಿಯೇ ಬಳಸಬಹುದು. ಇದೂ ಕೂಡ ಆನ್‌ಲೈನ್‌ ಎಡಿಟರ್‌ ಆಗಿದ್ದು ಕನ್ನಡ ಸಾಫ್ಟ್‌ವೇರ್‌ ಇನ್‌ಸ್ಟಾಲ್‌ ಮಾಡುವ ಗೊಂದಲವಿಲ್ಲದೆ ಇಂಟರ್ನೆಟ್‌ನಲ್ಲಿ ಕನ್ನಡವನ್ನು ಎಡಿಟ್‌ ಮಾಡುವ ಅವಕಾಶ ಕಲ್ಪಿಸುತ್ತದೆ. ಕ್ವಿಲ್‌ಪ್ಯಾಡ್‌ ಕನ್ನಡ ಟೂಲ್ ಬಳಸಲು ಇಲ್ಲಿ ಕ್ಲಿಕ್ ಮಾಡಿ.


C. ಕನ್ನಡ ಅಕ್ಷರಗಳನ್ನು ಟೈಪ್‌ ಮಾಡುವುದನ್ನು ಕಲಿಯಬೇಕೆ?
ಕಂಪ್ಯೂಟರ್‌ನಲ್ಲಿ ಕನ್ನಡ ಟೈಟ್‌ ಮಾಡಲು ಹಲವು ಕೀಬೋರ್ಡ್ ವಿನ್ಯಾಸಗಳಿವೆ. ಬರಹ ಮತ್ತು ನುಡಿಯನ್ನು ಇಲ್ಲಿ ವಿವರಿಸಿದ್ದೇನೆ.

ಬರಹ ಕೀಬೋರ್ಡ್:
ಇದು ಅತ್ಯಂತ ಸರಳ ಕನ್ನಡ ಟೈಪಿಂಗ್‌ ಕೀಬೋರ್ಡ್ ವಿನ್ಯಾಸ (ಟೈಪಿಂಗ್ ಕೀಬೋರ್ಡ್ ವಿನ್ಯಾಸ ಎಂದರೆ ಇಂಗ್ಷೀಷ್ ಅಕ್ಷರಗಳನ್ನು ಒತ್ತುವ ಮೂಲಕ ಕನ್ನಡ ಅಕ್ಷರಗಳನ್ನು ಮೂಡಿಸುವುದು, ಯಾವ ಅಕ್ಷರಗಳನ್ನು ಒತ್ತಿದರೆ ಯಾವ ಅಕ್ಷರ ಮೂಡಬೇಕು ಎನ್ನುವುದನ್ನು ಕೀಬೋರ್ಡ್‌ ವಿನ್ಯಾಸಗಳು ನಿರ್ಧರಿಸುತ್ತವೆ.) ಇದು ಕನ್ನಡ ನನ್ನ ಮಾತೃ ಭಾಷೆ ಎನ್ನುವುದನ್ನು kannada nanna maatru bhaashe, ಎಂಬಂತೆ ಟೈಪ್‌ ಮಾಡುವ ವಿಧಾನದ್ದು. ಕನ್ನಡ ಇಲ್ಲದ ಮೊಬೈಲ್‌ನಲ್ಲಿ ನಮ್ಮ ಹೃದಯದ ಭಾವನೆಗಳನ್ನು ಪರಬಾಷೆಯಲ್ಲಿ ಅಭಿವ್ಯಕ್ತಿಸಲು ಕಷ್ಟವಾದಾಗ ನಮ್ಮದೇ ಭಾಷೆಯಲ್ಲಿ ಅಭಿವ್ಯಕ್ತಿಸಲು ನಾವು ಬಳಸುವ ಎಸ್ಸೆಮ್ಮಸ್‌ ಕನ್ನಡದ ಮಾದರಿಯದ್ದು ಈ ವಿನ್ಯಾಸ.
ಈ ವಿನ್ಯಾಸವನ್ನು ಕಲಿಯಲು ಇಲ್ಲಿ ಕ್ಲಿಕ್ ಮಾಡಿ

ಕಗಪ (ಕನ್ನಡ ಗಣಕ ಪರಿಷತ್ತು) ಕೀಬೋರ್ಡ್:
ಇದು ನುಡಿ ಸಾಫ್ಟ್ ವೇರಿನ ಕೀಬೋರ್ಡ್. ಇದು ಬಹುತೇಕ ಕನ್ನಡ ಟೈಪ್‌ರೈಟರ್‌ ಮಾದರಿಯದ್ದು. ಇದನ್ನು ಕಲಿತರೆ ಟೈಪ್‌ ಮಾಡುವುದು ಬಹಳ ಸುಲಭ. ಇದು ನಮ್ಮ ಟೈಪಿಂಗ್‌ ಸಮಯವನ್ನು ಉಳಿಸುತ್ತದೆ. ಇದನ್ನು ಕಗಪ ಕೀಬೋರ್ಡ್‌ ಎನ್ನುತ್ತಾರೆ.

ಇದನ್ನು ಕಲಿಯುವ ಆಸಕ್ತಿ ನಿಮಗಿದ್ದರೆ ಇಲ್ಲಿ ಕ್ಲಿಕ್ಕಿಸಿ.

Friday, October 16, 2009

The following precautions are to be taken care of when playing with Fireworks.




"Let this diwali burn all your bad times and enter you in good times...."

1.Store water in at least two buckets and keep it ready near the place of fireworks celebrations.

2.Keep a wet towel ready to cover your exposed parts when some crackers may accidentally burst in the face.

3.Keep the regulators of your cooking gas cylinders turned off and do not keep the cylinders in balconies or open spaces to keep them protected from stray rockets.

4.Put earplugs (or cotton wool) in your ears.

5.Wear cotton clothes while playing with fireworks. Wear full undergarments to be on the safe side to protect your skin.

6.Keep small portable extinguishers handy for urgent use.

7.Keep the telephone numbers of fire, ambulance, police etc stored on your cells and by the telephone.

8.Use proper directions when handling fireworks. Don’t forget to physically examine the individual pieces of crackers etc before lighting them as some have wicks on the wrong end that eventually may blast or burn on your side.

9.Keep some safe distance from others who are celebrating in the fireworks to avoid collisions. Watch your step when using fireworks on the terraces especially.

10.Use noninflammable containers to put the rockets ready for lighting and release.

11.The elderly will do well to keep themselves indoors as long as possible to keep away form noise and air pollution for longer periods. Those sick should see that they have not missed their regular dose of medicines like BP, Diabetic tablets etc.

12.Drink adequate amounts of water on the night of Diwali.

13.Keep the unused/ reserve stock of fireworks away from the lighting areas.

14.See that the decorative lamps lining the parapet walls should not burn any cloth lines and leaf and flower garlands hanging thereabouts.

15.Check the interior and the roof of your home from time to time during the night to detect any fire. To the extent possible, keep at home on the night of Diwali day to watch your house.

16. In the stock of fireworks, separate explosive crackers from those illuminating ones and keep them separately in different boxes to lessen the impact in case of sudden fire.

17. When playing with chakras and pencils/ sparklers, raise your head as well as your hand a bit higher at convenient angle to avoid sparks falling on your feet and clothes.

18. Do not rub your eyes in case of smoke getting into them. Wash your eyes with cold water.

19. Keep cracking with an eye on safety.

Happy and Prosperous Diwali Celebrations....

ಸಹೃದಯ ಕನ್ನಡಿಗರೆಲ್ಲರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು

Thursday, October 15, 2009

Stunning Pictures and Stories of Adventure

Watch out for extremly adventurous:

Discovery Time Wrap

Watch out for Discovey's marvellous Time Wrap samples

Wednesday, October 14, 2009

Newspapers & Magazines - Kannada (Karnataka)

Dailes:

Kannada Prabha - Kannada Newspaper from the New Indian Express

Janatha Madhyama - published from Hassan

Prajavani - Kannada News Paper from Deccan Herald

Praja Pragathi - Tumkur Kannada newspaper

Vartha Bharathi- published form Manipala and Bangalore

Vijaykarnataka- published by times group

Sanjevani-evening daily

ee sanje-evening daily

Udayavani


Magazines:

Roopatara

Taranga

Kannada times

All rounder


Tabloids:

Agni

Lankesh

Lankesh pathrike

Ee bhanuvaara

Chirathe

Kannadanaadi

Saturday, September 26, 2009

Kannada Television Channels, Adress & Contacts









tv9 kannada & News9
No.13/1, Opp Hockey Stadium, Rhenius St, Civil Station, Richmond Town, Bangalore - 560025
(80)-40312702, 40312703 (80)-41134999
http://www.tv9.net/

Suvarna & Suvarna News
No.202, 2nd Flr, Embassy Square, No.148, Opp To Police Commissioners Office, Infantry Road, Bangalore - 560001
(80)-30550666, 30520000 (80)-30550606
www.asianetglobal.com

Etv Kannada
Mr Subba Naidu (Chief Manager) No.9/7,Kcn Bhavan, Yamuna Bai Rd,
Madhavnagar, Bangalore - 560001
(80)-22384360, 22384361 (80)-22384483, 22386862

Udaya tv, U2, Ushe tv, Udaya varthegalu, Udaya Movies, Chintu tv, Hasya tere
No.16/A, 2nd Flr, Maratha Bhavan, Thimmaiah Rd, Vasanth Nagar,
Bangalore - 560052
(80)-22357272 (80)-22357298
www.sunnetwork.org

Kasturi tv
No.12 & 12/1, Josco Jewellery Bldg, Opp To Sir M Vishveshwarya Museum,
Kasturba Road, Bangalore - 560001(80)-27273344, 40443293, 40443333
http://www.kasthuritv.com/

Zee Kannada
No.39, 3rd Flr, United Mansion, M G Road, Bangalore - 560001
(80)-30918300, 25581234, 66109939 (80)-25580099
http://www.zeekannadatv.com/

Chandana (DD 9)
J C Nagar, Bangalore - 560006
(80)-23333831, 23333201, 23542599, (80)-23542799
http://www.ddindia.gov.in/

Raj Music Kannada
No.808, 8th Flr, Manipal Centre,No.47, South Blk, Dickenson Rd, M G Road, Bangalore - 560001
Mr Anil Kumar
(80)-25323239 (91)-9886043376
http://www.rajtvnet.in/

UGC pay scales for State Lecturers:




University and college teachers in Karnataka will get revised University Grants Commission (UGC) pay scales. The retirement age for university teachers is raised from 60 to 62 years. The pay revision along the lines of the Sixth Pay Commission recommendations will benefit an estimated 18,630 university and college teachers. The beneficiaries of the retirement age enhancement will, however, be much less. Announcing the Cabinet decisions, Home Minister V S Acharya said the revised pay scales for teachers would be implemented with retrospective effect from January 1, 2006. The hike for teachers will range between Rs 10,000 and Rs 35,000 per month depending on the seniority and the positions they hold. The Cabinet also met the long-pending demands of junior doctors, who had threatened to go on indefinite strike. Nearly 4,000 doctors are employed with the health department. The Cabinet approved allowances between Rs 4,000 and Rs 12,500 a month for the government doctors. The hike for doctors (ranging between Rs 3,000 and Rs 8,000 per month) would be with immediate effect. The decision to hike the pay scale of university/college teachers is in line with the UGC-constituted Chaddha Committee recommendation. The Chaddha committee had recommendations implementation of the revised UGC scales for college teachers. According to education department sources, a total of 18,630 lecturers, including 6,740 faculty members in government colleges, 9,650 in private aided colleges and 2,360 in university colleges, will benefit from the decision.The teachers’ wage bill for the government will shoot up from the present Rs 590 crore to Rs 815 crore per annum, sources added. The Centre will bear 80 per cent of the revised salary bill from January 1, 2006 to March 2010. Later on, the State Government will have to foot the entire bill. Acharya said the arrears of Rs 954 crore would have to be paid as the difference for a period of 51 months from January 1, 2006, to March 31, 2010. The Union Government will bear 80 per cent (Rs 763 crore) of the salary bill, and the remaining 20 per cent (Rs 191 crore) will be borne by the State Government from January 1, 2006, to March 2010. The date of release of the first instalment of arrears as well as the revised salary will be announced later.
Designation changes
There will be a change in designations following the implementation of the revised pay scales. The posts of lecturer, senior lecturer or selection grade lecturer will go, and instead there will be assistant professor, associate professor and a professor. The fixation formula, allowances, yardsticks for career advancement scheme, qualification criteria and leave facilities will be as stipulated by the UGC.However, sources said the government had decided not to create new posts. This is in line with a Finance Department proposal. Besides, leave and medical reimbursement facilities and pensionary benefits will continue to be applicable to State Government employees.Moreover, teaching staff without UGC-prescribed qualifications are not entitled to avail the revised scheme, the sources added. The Federation of University and College Teachers’ Association in Karnataka (Fuctak) welcomed the decision to implement the revised scales of pay from January 1, 2006.


Thursday, September 17, 2009

Husharu movie review

Aadarsha has shown much improvement in his third movie Hushaar as a director-cum-hero after Dumbee and Nage Habba.
Still from Hushaar
Still from Hushaar

Film: Hushaar (Thriller)
Cast: Aadarsha, Mallika Kapoor, Anand
Direction: Aadarsha
Duration: 2 hours 16 minutes

With a good selection of artistes and a controlled script and narration, he could have done a much better job. But the director scores in excellently combining a murder mystery with romance in the second half. The camerawork brilliantly captures the sequences in the forest area.

The story revolves around a group of youngsters who are found dead under mysterious circumstances in a forest near a village. Vishwas (Aadarsha), a CoD officer, who comes to the village on the pretext of doing research on agriculture, solves the mystery. We also have Akshatha (Mallika Kapoor) who falls in love with Vishwas.

Aadarsha excels as hero and music director. Mallika Kapoor fails to impress. Master Anand's performance as the hero's friend is amateurish. Aadarsha's music is good.