Monday, October 26, 2009

ಮಾಧ್ಯಮಗಳೂ ಮೋಸ ಮಾಡ್ತವಾ???

ಮಾಧ್ಯಮಗಳೂ ಮೋಸ ಮಾಡ್ತವಾ??? ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಬಹುಷಃ ಇದು ಸಕಾಲ. ಟಿವಿ, ಪತ್ರಿಕೆಗಳು ಹಠಕ್ಕೆ ಬಿದ್ದಿರುವಂತೆಮಾಧ್ಯಮ ತತ್ವಗಳನ್ನು ಗಾಳಿಗೆ ತೂರುತ್ತಿರುವ ಸಂದರ್ಭದಲ್ಲಿ ಇದು ಪ್ರಸ್ತುತ ಪ್ರಶ್ನೆ. ಇದೇ ಥೀಮ್ ಹಿಡಿದು ಹುಡುಕಾಟಕ್ಕೆ ಹೊರಟರೆ ಉತ್ತರಹೌದುಎಂದೇ ಆಗಿರುತ್ತದೆ. ಈಗಿನ ರಿಯಾಲಿಟಿ ಷೋಗಳನ್ನು, ’ಭಯಾನಕ, ವಿಸ್ಮಯ, ನಿಗೂಢ, ಹಾಗೂ ಅಗೋಚರ...’ ಎಂದು ಜನರನ್ನು ಕುರಿಮಂದೆಯಂತೆ ಮರುಳು ಮಾಡುತ್ತಿರುವ ಕಾರ್ಯಕ್ರಮಗಳನ್ನು ನೋಡಿದರೆ ಪ್ರಶ್ನೆಗೆ ಸೂಕ್ತ ಸಾಕ್ಷ್ಯಗಳು ದೊರೆಯುತ್ತವೆ. ಅಷ್ಟಕ್ಕೂ ಪ್ರಶ್ನೆ ಈಗ ಹುಟ್ಟಿದ್ದಾದರೂ ಯಾಕೆ? ಇತ್ತೀಚೆಗೆ ಬಿಡುಗಡೆಯಾದ, ಯೋಗರಾಜಭಟ್ನಿರ್ದೇಶಿಸಿ, ಜಯಂತ ಕಾಯ್ಕಿಣಿ ಸಾಹಿತ್ಯ ಬರೆದು, ಮನೊಮೂರ್ತಿ ಸಂಗೀತ ಒದಗಿಸಿರುವಮನಸಾರೆಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಬಂದ ರಿವ್ಯೂ ನೋಡಿ, ಚಿತ್ರ ವೀಕ್ಷಿಸಿ ಬಂದರೆ ಇದು ಕೇವಲ ಪ್ರಶ್ನೆ ಮಾತ್ರ ಅಲ್ಲ ಹೊತ್ತಿನ ಜರೂರು ಎಂದು ಪ್ರಜ್ಞಾವಂತರ್ಯಾರಿಗಾದರೂ ಅನಿಸದೆ ಇರುವುದಿಲ್ಲ.

ಮನಸಾರೆಎಂಬ ಹುಚ್ಚರ ಚಿತ್ರಕ್ಕೆ ಬಹುತೇಕ ಮುದ್ರಣ, ದೃಶ್ಯ ಮತ್ತು ಇತ್ತೀಚಿನ ಇಂಟರ್ನೆಟ್ಮಾಧ್ಯಮಗಳು ಭಾರಿ ಪ್ರಚಾರ ನೀಡಿದವು; ಇನ್ನಿಲ್ಲದಂತೆ ಬರೆದವು. ಇದೊಂದು ಪ್ರೇಮಕಾವ್ಯ, ಚೆಂದದ ನಿರೂಪಣೆ, ಘಟನಾನುಘಟಿಗಳ ಮಹಾ ಸಂಯೋಜನೆ ಎಂದೆಲ್ಲ ಹೊಗಳಿದವು. ಯಾವ ಆಧಾರದ ಮೇಲೆ ವಿಮರ್ಶೆ ಬರೆದವು ಎನ್ನುವುದೇ ಈಗನ ಪ್ರಶ್ನೆ. ಅಲ್ಲದೆ ಎಲ್ಲ ಮಾಧ್ಯಮದಲ್ಲೂ ಮನಸಾರೆ ಚಿತ್ರದ್ದೇ ಮಾತು. ಚಿತ್ರ ಬಿಡುಗಡೆಯಾದ ಮೊದಲ ವಾರ ಎಲ್ಲವೂ ಮನಸಾರೆಮಯವಾಗಿತ್ತು.
ಒಂದಷ್ಟೂ ಸ್ಪಷ್ಟ, ಹಣದ ವ್ಯಾಮೋಹಕ್ಕೆ ಬಿದ್ದಿರುವ ಮಾಧ್ಯಮಗಳು ನಾಗರಿಕರನ್ನು ವಂಚಿಸುತ್ತಿವೆ. ಎಷ್ಟೊ ಜನರು ಮಾಧ್ಯಮಗಳಲ್ಲಿ ಬಂದಿರುವ ಚಿತ್ರ ವಿಮರ್ಶೆ ನೋಡಿಕೊಂಡೇ ಥಿಯೇಟ್ಗೆ ಕಾಲಿಡುವ ಮನಸ್ಸು ಮಾಡುತ್ತಾರೆ. ಇತ್ತ ಮಾಧ್ಯಮಗಳೇ ಕೆಟ್ಟ ಚಿತ್ರವೊಂದನ್ನು ಹೊಗಳಿ ಅಟ್ಟಕ್ಕೇರಿಸಿ ಜನರನ್ನು ತಪ್ಪು ದಾರಿಗೆ ಎಳೆದರೆ????

ಇದು ಬೇಲಿಯೇ ಎದ್ದು ಹೊಲ ಮೇದ ಕತೆಯಾಗಿದೆ. ಮಾದ್ಯಮಗಳು ಇಂದು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತಿವೆ. ಇಂದು ಹಣಕೊಟ್ಟು ಬರೆಸುವ ಪ್ರಾಯೋಜಿತ ಬರಹಗಳು ಸಾಮಾನ್ಯವಾಗಿವೆ. ಜನ ಮಾಧ್ಯಮಗಳ ಮಾತನ್ನು ವೇದವಾಕ್ಯ ಎಂದು ನಂಬುತ್ತಾರೆ. ಜನರ ನಂಬಿಕೆಯನ್ನೇ ದೌರ್ಬಲ್ಯ ಎಂದು ಭಾವಿಸಿ ಮಾಧ್ಯಮಗಳು ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಮಾಧ್ಯಮಗಳ ಸಾಮಾಜಿಕ ಹೊಣೆಗೇಡಿತನದ ಬಗ್ಗೆ ಬರೆಯುತ್ತಾ ಹೋದರೆ.... ಅದೊಂದು ಮುಗಿಯದ ಕಥೆ. ಇದಕ್ಕೆ ಅಂತ್ಯ ಹಾಡಬೇಕು. ಕುರಿತು ವ್ಯಾಪಕ ಚರ್ಚೆ ನಡೆದು ಮಾದ್ಯಮಗಳಿಗೆ ಕಡಿವಾಣ ಹಾಕಬೇಕು. ಈಗಾಗಲೇ ಕಮರ್ಷಿಯಲೈಸ್ಹೆಸರಿನಲ್ಲಿ ಸುದ್ದಿಗಳನ್ನು ಒಂದು ಸರಕಿನಂತೆ ಮಾರಾಟ ಆರಂಭಿಸಿರುವ ಮಾಧ್ಯಮಗಳು ಈಗ ರಿಯಾಲಿಟಿ ಷೋಗಳ ಹೆಸರಲ್ಲಿ ಸಾಮಾಜಿಕ ಮೌಲ್ಯಗಳನ್ನೂ ಮಾರಾಟಕ್ಕಿಟ್ಟಿವೆ. ಮುಂದೆ ಏನಾಗಬಹುದು ನೀವೇ ಯೋಚಿಸಿ...

‘ಮನಸಾರೆ’ ಹೇಳ್ತೀನಿ.. ಇದೊಂದು ಐಲು-ಪೈಲು ಚಿತ್ರ


ಮಾಧ್ಯಮಗಳೆಲ್ಲ ‘ಬೊಬ್ಬೆ ಹೊಡೆದು ಪ್ರೇಕ್ಷಕರನ್ನು ಥಿಯೇಟರ್ ಗಳಿಗೆ ಮುಗಿ ಬೀಳುವಂತೆ ಶತ ಪ್ರಯತ್ನ ಮಾಡುತ್ತಿದ್ದರೆ ಅತ್ತ ಬ್ಲಾಕ್ ಟಿಕೆಟ್ ತಗೊಂಡು ಚಿತ್ರ ನೋಡೋ ವೀಕ್ಷಕರಿಗೆ ತಲೆ ಚಚ್ಚಿಕೊಳ್ಳುವುದೊಂದೆ ಬಾಕಿ...

ಇದು ಭಟ್ಟರ ಬಹು(ಹುಸಿ)ನಿರೀಕ್ಷಿತ ’ಮನಸಾರೆ’ ಚಿತ್ರದ ಒನ್‌ಲೈನ್‌ ನ್ಯೂಸ್‌. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ (ಹುಟ್ಟಿಸುವಂತೆ ಮಾಡಿದ್ದ) ಮನಸಾರೆ ಚಿತ್ರ ತೋಪೇಳುವುದು ಗ್ಯಾರಂಟಿ ಎನಿಸ್ತಿದೆ. ಅಭಿಮಾನಿ ದೇವರುಗಳನ್ನು ಪೀಡಿಸುವ ಯಾವ ಚಿತ್ರವೂ ಅದೇನೆ ಬೊಬ್ಬೆ ಹಾಕಿದರೂ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ. ಇದು ’ಮನಸಾರೆ’ಗೂ ಅನ್ವಯಿಸುತ್ತದೆ.
ಲಾಜಿಕ್‌ ಇಲ್ಲದೆ ಹರಿಯುವ ಸಂಭಾಷಣೆಯ ಝರಿ, ಪೋಲಿ ಪೋಲಿ ಡೈಲಾಗ್‌ಗಳು, ಅನಿವಾರ್ಯತೆಯೇ ಇಲ್ಲದೆ ಧುತ್ತನೆ ಎದುರಾಗುವ ಹಾಡು, ಒಂದು ಆಸ್ಪತ್ರೆಯ ಸುತ್ತ ಚಿತ್ರದ ಬಹುತೇಕ ರೀಲ್‌ ಮುಗಿಸುವ ನಿರ್ದೇಶಕ, ಕಂಬಕ್ಕೆ ಕಟ್ಟಿದ ಎಮ್ಮೆ ಎಳೆದಾಡುವಂತೆ ’ಕಾಮನಬಿಲ್ಲಿನ’ ಸುತ್ತವೇ ವೀಕ್ಷಕರನ್ನು ಎಳೆದಾಡಿಸುವ ಕಥೆ, ಹಿರೋಯಿನ್‌ನ ಕೂದಲು ನೋಡಿಕೊಂಡೆ ಕಾಲ ಕಳೆಯುವ ಹೀರೋ, ಒಂದು ಕಟ್ಟಡವನ್ನು ಎಷ್ಟೆಲ್ಲ ಕೋನಗಳಲ್ಲಿ ತೊರಿಸಲು ಸಾಧ್ಯ ಎಂದು ‌ಪ್ರಯೋಗ ಮಾಡುತ್ತಿರುವ ಕ್ಯಾಮೆರಾಮನ್‌, ಚೆಂದದ ಸಾಹಿತ್ಯವಿದ್ದೂ ಸಂಗೀತದ ಅಬ್ಬರದಲ್ಲಿ ಅದರ ಸವಿಯನ್ನು ಮರೆಮಾಡುವ ಸಂಗೀತ ನಿರ್ದೇಶಕ.... ಇವೆಲ್ಲ ಮನಸಾರೆ ಚಿತ್ರದ ನೆಗೆಟಿವ್‌ ಹೈಲೈಟ್‌ಗಳು.

ಚಿತ್ರಕ್ಕೊಂದು ಚೆಂದದ ಥೀಮ್ ಇದೆ; ಮನೋರೋಗಿಗಳ ಮನದಾಳವನ್ನು ಕೆದಕುವ ಪ್ರಯತ್ನವಿದೆ; ಸಮಾಜದ ಹುಚ್ಚುತನವನ್ನು ಮನಗಾಣಿಸುವ ಒಳನೋಟಗಳಿವೆ; ಹುಚ್ಚಾಸ್ಪತ್ರೆಯ ಹುಚ್ಚಾಟಗಳಿವೆ; ಆದರೆ ಸರಿಯಾಧ ನಿರೂಪಣೆಯಿಲ್ಲ; ಸೋ ಕಾಲ್ಡ್‌ ಡೈರೆಕ್ಟರ್ ಮುಂಗಾರುಮಳೆ ಯೋಗ-ರಾಜ ಭಟ್ಟರು ಅದ್ಯಾಕೋ ನಿರೂಪಣೆಯಲ್ಲಿ ಸೋತಂತೆ ಕಾಣುತ್ತಿದೆ..
ಚಿತ್ರ ಆರಂಭವಾದೊಡನೆ ಶುರುವಾಗುವ “ಪಾ..ರ..ಪಪ್ಪ...ಪ್ಪಾ..ರ” ಹಾಡು ತನ್ನ ರಾಕಿಂಗ್‌ ಶೈಲಿಯ ಸಂಗೀತದೊಂದಿಗೆ ಪಡ್ಡೆ ಹೈಕಳನ್ನು ಕುಣಿಸುತ್ತದೆ; ಸ್ಟುಡಿಯೋ ಸೆಟಪ್‌ ವಿಭಿನ್ನವಾಗಿದೆ. ಒಟ್ಟಿನಲ್ಲಿ ವೀಕ್ಷಕರ ನರನಾಡಿಗಳು ಮಿಡಿಯುವಂಥ ಹಾಡಿನೊಂದಿಗೆ ಆರಂಭವಾಗುವ ಈ ಚಿತ್ರ ಆರಂಭದಲ್ಲೇ ಆಹಾ ಬೊಂಬಾಟ್‌!!! ಅನ್ಸಿದ್ರೆ ಆಶ್ಚರ್ಯವಿಲ್ಲ. ಆದರೆ ಕೆಲವೇ ನಿಮಿಷಗಳಲ್ಲಿ ಅದರ ನಿಜ ಬಂಡವಾಳ ಬಯಲಾಗಿ ಬಿಡುತ್ತೆ.

ಇನ್ನು ಈ ಚಿತ್ರಕ್ಕೆ ಭಟ್ಟರದೇ ಸಂಭಾಷಣೆ. ಅದೇನು ಭಟ್ಟರು ಕುಡಿದ ಅಮಲಿನಲ್ಲಿ ಡೈಲಾಗ್‌ಗಳನ್ನು ಬರೆದರೋ ಏನೋ ಗೊತ್ತಿಲ್ಲ. ಅಂತೂ ತೀರ ಪೋಲಿ ಡೈಲಾಗ್‌ಗಳು ಕುಟುಂಬ ಸದಸ್ಯರೊಡನೆ ಕುಳಿತು ನೋಡುವುವರಿಗೆ ಮುಜುಗರ ಹುಟ್ಟಿಸುವುದಂತೂ ನಿಜ. ಕೆಲವು ಡೈಲಾಗ್‌ಗಳು ಎಲ್ಲೋ ಅಧ್ಯಾತ್ಮಿಕ ಲೆಕ್ಚರ್ ಕೊಡತ್ತಿರುವಂತೆ ಭಾಸವಾಗುತ್ತವೆ. ಯಾವುದೋ ತತ್ವಪದಕಾರರು ಭಟ್ಟರ ಮೈಮೇಲೆ ಬಂದು ಬರೆಸಿದರೋ ಏನೋ ಗೊತ್ತಿಲ್ಲ ಬದುಕಿನ ರಹಸ್ಯಗಳನ್ನು ಬೇಧಿಸುವಂತ ಸಂಭಾಷಣೆಗಳನ್ನು ತೀರ ಸರಳವಾಗಿ ಧಾರವಾಡ ಶೈಲಿಯಲ್ಲಿ ಹೇಳುವುದು ಚೆಂದ ಎನಿಸಿದರೂ ಎಷ್ಟು ಜನರಿಗೆ ಅರ್ಥವಾಗುತ್ತದೆ ಎನ್ನುವುದು ಇಲ್ಲಿನ ಪ್ರಶ್ನೆ.
ಜಯಂತ ಕಾಯ್ಕಿಣಿ ಬರೆದಿರುವ ಚಿತ್ರದ ಹಾಡುಗಳು ಇಂಪಾಗಿವೆ. ಸಾಹಿತ್ಯ ಮನಮುಟ್ಟುವಂತಿದೆ. ಆದರೆ ಸಂಗೀತದ ಅಬ್ಬರದಲ್ಲಿ ಸಾಹಿತ್ಯದ ಸವಿ ಸವಿಯಲು ಆಗುವುದೇ ಇಲ್ಲ. ಯಾಕಂದ್ರೆ ಇದರ ಲಿರಿಕ್ಸ್‌ ಅರ್ಥವೇ ಆಗುವುದಿಲ್ಲ. ಭಾವನೆಗಳನ್ನು ನವಿರಾಗಿ ಹಿಡಿದಿಡುವುದರಲ್ಲಿ ಕಾಯ್ಕಿಣಿ ಪಳಗಿದ ಕೈ ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಅದು ಇಲ್ಲೂ ಸಾಬೀತಾಗಿದೆ. ’ಎಲ್ಲೋ ಮಳೆಯಾಗಿದೆ..’ ಕಾಡುತ್ತೆ. ಇನ್ನು ಮನೋಮೂರ್ತಿಯವರ ಸಂಗೀತ ಮಾಮೂಲಿನಂತೆ ಮಧುರವಾಗಿದೆ. ಆದರೆ ಎಲ್ಲೋ ಹಳೆಯ ಟ್ಯೂನ್‌ಗಳು ಇಲ್ಲಿ ಮರುಕಳಿಸಿವೆ ಎನ್ನಿಸುವುದಂತೂ ಸತ್ಯ. ಹಾಡುಗಳು ಎಲ್ಲೆಂದರಲ್ಲಿ ಧತ್ತೆಂದು ಬರುವುದು ಸ್ವಲ್ಪ ಕಿರಿ ಕಿರಿ ಎನಿಸುತ್ತದೆ. ಎಷ್ಟೋ ಸಂದರ್ಭದಲ್ಲಿ ಹಾಡಿನ ಅಗತ್ಯವೇ ಕಾಣುವುದಿಲ್ಲ. ಛಾಯಾಗ್ರಾಹಕನಿಗೆ ಹೆಚ್ಚಿನ ಕೆಲಸವೇನೂ ಇಲ್ಲ. ಯಾಕೆ ಅಂದ್ರೆ ಇಡೀ ಚಿತ್ರ ಹುಚ್ಚಾಸ್ಪತ್ತೆಯೊಂದರ ಸುತ್ತವೇ ಗಿರಕಿ ಹೊಡೆಯುತ್ತದೆ. ಹಾಗಾಗಿ ಅವ್ರಿಗೂ ಅದೇ ಕಾಮನಬಿಲ್ಲು ಕಟ್ಟಡವನ್ನು ಪದೇ ಪದೇ ಬೇರೆ ಬೇರೆ ಕೋನಗಳಲ್ಲಿ ತೋರಿಸದೆ ವಿಧಿಯಿಲ್ಲ. ವೀಕ್ಷಕರಿಗೆ ನೋಡದೆ ವಿಧಿಯಿಲ್ಲ.

ನಟನೆಯ ವಿಷಯಕ್ಕೆ ಬಂದರೆ ಮಾಗಿದ ನಟನೆ ಎಲ್ಲೂ ಕಂಡುಬರುವುದಿಲ್ಲ. ಇತ್ತೀಚೆಗಷ್ಟೆ ನಾಯಕನಟನಾಗಿರುವ ದಿಗಂತ್‌ ಹೆಚ್ಚು ಲವಲವಿಕೆಯಿಂದ ನಟಿಸಿದ್ದಾರೆ. ಡೈಲಾಗ್‌ ಡಿಲಿವರಿಯಲ್ಲಿ ಸರಾಗವಿದೆ. ಆದರೆ ಗಣೇಶನ ಮುಂಗಾರಮಳೆ ಸ್ಟೈಲ್‌ ಕಾಪಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಡೈಲಾಗ್‌ ಹೇಳುವ ಶೈಲಿಯೇ ಬಹಿರಂಗ ಪಡಿಸುತ್ತದೆ. ಆದರೆ ಡೈಲಾಗ್‌ ಹೇಳುವ ಸ್ಪೀಡ್‌ ಜಾಸ್ತಿಯಾಗಿದೆ. ಒಂದು ಡೈಲಾಗ್‌ ಅನ್ನು ಸವಿಯುವ ಮುನ್ನವೇ ಪೌರಾಣಿಕ ಚಿತ್ರದಲ್ಲಿ ಬರುವ ಸರಳುಗಳ ಸರಣಿಯಂತೆ ನುಗ್ಗಿ ಬರುವ ಡೈಲಾಗ್‌ಗಳು ಅದರ ಸವಿಯನ್ನು ವೀಕ್ಷಕರಿಗೆ ತಟ್ಟುವುದೇ ಇಲ್ಲ. ಆಂದ್ರಿತಾ ರೇ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ಹಾಡನಲ್ಲಂತೂ ಸ್ವಲ್ಪ ಜಾಸ್ತಿನೇ ಎಕ್ಸ್ಪೋಸ್‌ ಆಗಿದ್ದಾರೆ. ನೋಡುಗರ ಮೈ ಬಿಸಿ ಏರುತ್ತದೆ. ಗಂಡಸರನ್ನು ಅತಿಯಾಗಿ ದ್ವೇಷಿಸುವ ಇವರು ಸಿಕ್ಕವರನ್ನೆಲ್ಲಾ ಚಾಕುವಿನಿಂದ ಚುಚ್ಚಲು ಹೋಗಿ ಸ್ವಲ್ಪ ಹೊತ್ತಿನ ನಂತರ ’ಸಾರಿ..ಸಾರಿ’ ಎಂದು ಅಳುವ ಅವರ ಅಮಾಯಕತೆ ಅಯ್ಯೋ ಎನಿಸುತ್ತದೆ. ಹುಬ್ಬಳ್ಳಿಯಂವ ಶಂಕರಣ್ಣ ತನ್ನ ಅಪ್ಪಟ ಉತ್ತರ ಕರ್ನಾಟಕ ಶೈಲಿಯಿಂದ ಬೇಸತ್ತ ಮುಖಗಳಲ್ಲಿ ನಗೆಯ ಸಿಂಚನ ಮೂಡಿಸುತ್ತಾರೆ. ಹುಚ್ಚಾಸ್ಪತ್ರೆಯಲ್ಲಿ ಬರುವ ಕೆಲವು ವಿಚಿತ್ರ ಪಾತ್ರಗಳು ಎಂದರೆ, ಎಸ್ಕೇಪ್‌ ರಾಜನ ಎಸ್ಕೇಪ್‌ ಐಡಿಯಾ, ಒಬ್ಬ ಹುಚ್ಚನ ’ನಂಗೆ ಬಟ್ಟೆ ಬೇಡಾ.. ’ ಎಂದು ಕಿರುಚುವ ಡೈಲಾಗ್ ಚಿತ್ರದುದ್ದಕ್ಕೂ ರಿಪೀಟ್‌ ಆಗಿದ್ದರೂ ಬೋರು ಎನಿಸುವುದಿಲ್ಲ. ಅಲ್ಲದೆ ಚಿತ್ರಕ್ಕೆ ಲವಲವಿಕೆ ತಂದು ಕೊಟ್ಟಿವೆ. ಬೀದಿಯಲ್ಲಿ ವಿದ್ಯುತ್‌ ತಯಾರಿಸುವ ಹೊಸ ಐಡಿಯಾ ಚೆನ್ನಾಗಿದೆ.

ಒಂದಿಷ್ಟು ಕಥೆಯ ಹೂರಣ...

ಮದುವೆ ಪಂಕ್ಷನ್‌ನಲ್ಲಿ ಹೀರೋ ’ಜೀವನ ಪಾಠ’ದ ಪ್ರವಚನದೊಂದಿಕೆ ಆರಂಭವಾಗುವ ಕಥೆ ಇದ್ದಕ್ಕಿದ್ದಂತೆ ಎಲ್ಲೆಲ್ಲೂ ಹರಿಯುತ್ತದೆ.ಏನಾಯ್ತು? ಯಾಕಾಯ್ತು? ಎಂದು ವೀಕ್ಷಕರು ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ಮತ್ತೇನೋ ಆಗಿಬಿಟ್ಟಿರುತ್ತದೆ. ಸಿನಿಮೀಯ ನಿಯಮದಂತೆ ಅಚಾನಕ್ಕಾಗಿ ಹೀರೋ (ದಿಗಂತ್‌) ದಟ್ಟ ಕಾಡಿನ ಮಧ್ಯೆ ಇರುವ ಮಾನಸಿಕ ಚಿಕಿತ್ಸಾ ಕೇಂದ್ರವೊಂದರ ಅತಿಥಿಯಾಗ್ತಾನೆ. ಅಲ್ಲಿ ಅವನೊಂದಿಗೆ ಒಂದಷ್ಟು ಹರಟೆ ಹೊಡೆಯಲು ಕೆಲವು ಸಹ-ಹುಚ್ಚರು, ಇನ್ನೇನು ಹೇಗೋ ಅಲ್ಲಿಂದ ಎಸ್ಕೇಪ್‌ ಆಗ್ಬೇಕು... ಅಲ್ಲಿ ಒಬ್ಬಳು ಸುಂದರ ಹುಚ್ಚಿ ಐ ಮೀನ್‌ ಹೀರೋಯಿನ್‌ (ಆಂದ್ರಿತಾ ರೇ), ಯಥಾಪ್ರಕಾರ ಅವಳು ಹೀರೋ ಕಣ್ಣಿಗೆ ಬೀಳುತ್ತಾಳೆ. ಅವಳ ಮೋಹಕ ಹೆರಳಿಗೆ ಮರುಳಾದ ಹೀರೋ ’ಹಾಳಾಗಿ’ ಹೋಗ್ತಾನೆ. ಅಲ್ಲಿಗೆ ಶುರು ಅವನ ಪ್ರೇಮ ಪರಸಂಗ.

ಚಿತ್ರ ಆರಂಭದಲ್ಲಿ ಹಿರೋ ಜೀವನ, ಮದುವೆ, ಹೆಂಡತಿ, ಪ್ರೀತಿ... ಮುಂತಾಗಿ ಕೊಡುವ ಲೆಕ್ಚರ್ ಸತ್ಯ ಎನಿಸಿದರೂ ತೀರಾ ಉಡಾಫೆಯಾಗಿದೆ. ಚಿತ್ರದ ಬಹುತೇಕ ಕತೆ ಕಾಡಿನ ಮಧ್ಯೆ ಇರುವ ಹುಚ್ಚರ ಸಂತೆಯಲ್ಲೇ ಗಿರಕಿ ಹೊಡೆಯುತ್ತದೆ. ಇದರೊಂದಿಗೆ ನೋಡುಗರ ತಲೆಯನ್ನೂ ಗಿರಕಿ ಹೊಡೆಸುತ್ತದೆ. ಇದರಿಂದ ಬಿಡುಗಡೆ ಸಿಕ್ಕರೆ ಸಾಕು ಎಂದು ವೀಕ್ಷಕ ಅಂದುಕೊಳ್ಳುತ್ತಿರುವಾಗಲೇ ನಾಯಕ ನಾಯಕಿಯನ್ನು ಅಲ್ಲಿಂದ ಎಸ್ಕೇಪ್‌ ಮಾಡಿಕೊಂಡು ಬರುತ್ತಾನೆ. ನೋಡುಗರಿಗೆ ಏನೋ ಒಂದು ರೀತಿಯ ಸಮಾಧಾನ. ಅಂತೂ ಕಥೆ ಈಗಲಾದರೂ ಮತ್ತೊಂದು ಮಗ್ಗುಲಿಗೆ ಹೊರಳಿತಲ್ಲ ಎಂದು. ಹೀರೋಯಿನ್‌ ಹೇಳಿದ ಕಡೆಯೆಲ್ಲ 105ಆಂಬುಲೆನ್ಸ್‌ ಓಡಿಸುವ ನಾಯಕ ಕೊನೆಗೆ ಡೀಸೆಲ್‌ ಮುಗಿದಾಗ ಅದನ್ನು ಅಲ್ಲೆಲ್ಲೋ ಬಿಟ್ಟು ಫ್ಲಾಶ್‌ಬ್ಯಾಕ್‌ ಹಿಡಿದು ಹೊರಡುತ್ತಾರೆ. ಆಂಧ್ರಿತ ತನ್ನ ಪಾಳು ಮನೆಗೆ ಹೋಗಿ ಅಲ್ಲಿ ಅಪ್ಪ-ಅಮ್ಮನ ಜಗಳ, ತಂದೆಯ ಕ್ರೌರ್ಯವನ್ನು ನೆನಪಿಸಿಕೊಳ್ಳುವ ದೃಶ್ಯಗಳು ಭಾವನೆಗಳನ್ನು ಕೆದಕುತ್ತವೆ. ಇಲ್ಲಿಂದ ಮುಂದೆ ನಿರ್ಜನ ರಸ್ತೆಯಲ್ಲಿ ಹುಡುಗರ ಪ್ರೇಮ ಪುರಾಣದ ಕುರಿತು ಹೀರೋನ ತಡೆಯಿಲ್ಲದ ವಾಗ್ಝರಿ ಕೆಳಲು ಇಷ್ಟವಾಗುತ್ತವೆ (ನನ್ನಂಥ ಬಿಸಿರಕ್ತದ ಯುವಕರಿಗೆ). ಇಲ್ಲಿ ವೀಕ್ಷಕರ ಮಹಾಪ್ರಭುಗಳ ಊಹೆಗಳು ಗರಿಗೆದರುತ್ತವೆ. ಇಬ್ಬರೂ ಕಾಡಿನಲ್ಲಿ ಅಲೆಯುತ್ತಾ ತಿರುಗುತ್ತಾರೆ. ಏಕಾಂತ ಕಾಡಿನಲ್ಲಿ ಒಂದಷ್ಟು ರೊಮ್ಯಾಂಟಿಕ್ ಕ್ಷಣಗಳನ್ನು ಸವಿಯಬಹುದು, ಕೆಲವು ಮಧುರವಾಧ ’ಲವ್‌’ಲಿ ಮಾತುಗಳನ್ನು ಕೇಳಬಹುದು, ಕಾಡಿನ ಏಕಾಂತತೆಯಲ್ಲಿ ಆ ಹುಚ್ಚರ ಪ್ರೀತಿಯ ಆಪ್ತ ಅಪ್ಪುಗೆಯನ್ನು ಸವಿಯಬಹುದು,.. ಇನ್ನು ಏನೇನೋ ಊಹೆಗಳು ನೆಲೆಸಿಬಿಡುತ್ತವೆ. ನಾಯಕಿಯಂತೂ ’ನಡಿ ಆಸ್ಪತ್ರೆಗೆ ಹೋಗೋಣ’ ಎಂದು ದುಂಬಾಲು ಬಿದ್ದು ’ಕಾಮನಬಿಲ್ಲಿ’ನ (ಹುಚ್ಚಾಸ್ಪತ್ರೆ) ಅಂಚಿಗೂ ಬಂದು ಬಿಡುತ್ತಾಳೆ. ನಾಯಕ ’ಬೇಡ ಬನ್ರಿ ಹೋಗೋಣ’ ಎಂದು ಗೋಗರೆಯುತ್ತಿರುತ್ತಾನೆ.

ಇಲ್ಲಿ ಹೀರೋಯಿನ್‌ ಮನಸ್ಸು ಬದಲಾಯಿತು.. ಇಬ್ಬರೂ ಗೂಡಿನಿಂದಾರಿತ ಸ್ವಚ್ಛಂದ ಪಕ್ಷಿಗಳಾಗುತ್ತಾರೆ ಎಂದು ಎಲ್ಲ ಕಣ್ಣುಗಳು ಕಾತರದಿಂದ ಕಾಯುತ್ತಿರುತ್ತವೆ. ಆಗ.... ಅವಳು ಮತ್ತೆ ಅದೇ ಹುಚ್ಚರ ಸಂತೆಗೇ ಹೊರಟೇ ಹೊಗುತ್ತಾಳೆ. ಇಲ್ಲಿಗೆ ಚಿತ್ರದ ಬಗ್ಗೆ ವೀಕ್ಷಕರ ನಿರೀಕ್ಷೆ ನಿಂತುಬಿಡುತ್ತದೆ. ತಾಳ್ಮೆ ಪಾದದಡಿಗೆ ಸಿಲುಕಿ ಭಟ್ಟರ ಬೈಗುಳ ಆರಂಭವಾಗುತ್ತವೆ. ವೀಕ್ಷಕರೆ ಕಲ್ಪನೆಗೆ ವಿರುದ್ಧವಾಗಿ, ಅನಿರೀಕ್ಷಿತವಾಗಿ ನಡೆಯುವುದೇ ಚಿತ್ರದ ಹಗ್ಗಳಿಕೆಯೇ? ಕೆಲವು ಸಿದ್ಧ ಮಾದರಿಗಳನ್ನು ಮುರಿಯಬಾರದು. ಅದನ್ನು ವೀಕ್ಷಕರು ಅಷ್ಟು ಒಪ್ಪಿಕೊಳ್ಳುವುದಿಲ್ಲ ಎನ್ನುವ ಸತ್ಯ ಭಟ್ಟರಿಗೆ ಗೊತಿಲ್ಲ ಎನಿಸುತ್ತದೆ.

Tuesday, October 20, 2009

Artificial Retina Can Restore Sight to the Blind


An artificial retina could restore sight to the blind, according to new research from the Massachusetts Institute of Technology.

The device can be plugged directly into the optic nerve and is based on widely used cochlear implants.

The artificial retina is designed to help people with advanced macular degeneration or retinitis pigmentosa, progressive diseases that permanently blind patients, usually older patients.

Some drugs can delay the process, but once the cells that detect light (rods) and color (cones) die, they are gone.

The nerves behind the rods and cones do survive, however. For a patient to see again, something needs to stimulate the nerves. A mild electrical charge, applied using a self-contained, surgically implanted device could stimulate the optical nerves and allow a person to see again.

Saturday, October 17, 2009

ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ?


ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವುದು ಹೇಗೆ? ಇದು ಕಂಪ್ಯೂಟರ್‌ ಬಳುಸವ ಬಹುತೇಕ ಕನ್ನಡಿಗರ ಬಹುದೊಡ್ಡ ಪ್ರಶ್ನೆ.

ಕನ್ನಡದಲ್ಲಿ ಮೇಲ್ ಕಳಿಸುವ ಅವಕಾಶ ಇದ್ದಿದ್ದರೆ ಎಷ್ಟು ಚೆನ್ನ ಇತ್ತು? ಚಾಟ್ ಮಾಡುವಾಗ ಕನ್ನಡದಲ್ಲೂ ಒಂದಷ್ಟು ಡೈಲಾಗ್‌ ಹೊಡೆಯುವಂತಿದ್ದರೆ.... ಆಹಾ!!! ? ಫೈಲ್‌ ಮತ್ತು ಪೋಲ್ಡರ್‌ಗಳನ್ನು ನಮ್ಮದೇ ಭಾಷೆಯಲ್ಲಿ ಸೇವ್‌ ಮಾಡುವ ಅವಕಾಶ ಇದ್ದಿದ್ದರೆ? ಬ್ಗಾಗ್‌ಗಳಲ್ಲಿ ಅರ್ಥವಾಗದೆ ಅವಾಂತರ ಸೃಷ್ಟಿಸುವ inglish kannadavannu (ಇಂಗ್ಲೀಷ್‌ ಕನ್ನಡದಲ್ಲಿ nanu nimma abhimani- ಇದನ್ನು ನನು ನಿಮ್ಮ ಅಭಿಮನಿ , paipoti tevravagi nadiyuttide- ಪಾಯ್‌ಪೊಟಿ ತೆವ್ರವಗಿ ನದಿಯುಟ್ಟಿದೆ ಎಂದೂ ಓದಬಹುದು ಇದರ ಸರಿಯಾಧ ಅರ್ಥ ಪೈಪೋಟಿ ತೀವ್ರವಾಗಿ ನಡೆಯುತ್ತಿದೆ ಎಂದು. ಇದರ ಅವಾಂತರಗಳು ಒಂದಲ್ಲ ಎರಡಲ್ಲ.. ) ಬಿಟ್ಟು ಕನ್ನಡದಲ್ಲೇ ಕಾಮೆಂಟ್‌ ಬರೆಯುವಂತಿದ್ದರೆ? ಎಂಎಸ್‌ ವರ್ಡ್‌, ಎಕ್ಸೆಲ್‌, ಪವರ್‌ಪಾಯಿಂಟ್‌ನಲ್ಲಿ ಕನ್ನಡದಲ್ಲೇ ಲೆಟರ್‌, ಪ್ರೆಸೆಂಟೇಷನ್‌, ಚಾರ್ಟ್‌ ಎಲ್ಲವನ್ನೂ ತಯಾರಿಸುವ ಹಾಗಿದ್ದರೆ? ನಿಮ್ಮ ಇಂಥ ಹತ್ತಾರು ಪ್ರಶ್ನಗಳಿಗೆ ಈ ಲೇಖನ ಉತ್ತರ ಒದಗಿಸುತ್ತದೆ.

ಕಂಪ್ಯೂಟರ್‌ನಲ್ಲಿ ಕನ್ನಡ ಟೈಪ್‌ ಮಾಡಲು ಎರಡು ವಿಧಾನಗಳಿವೆ. ಅವು ಮೂಲಭೂತವಾಗಿ ಒಂದು ANSI ಮತ್ತೊಂದು UNICODE ಮಾದರಿಯವು. ನಮ್ಮ ಬರಹ, (ಬರಹ ಈಗ ಯೂನಿಕೋಡ್‌ನಲ್ಲೂ ಲಭ್ಯವಿದೆ) ನುಡಿ ಮತ್ತು ಶ್ರೀಲಿಪಿ ಇವೆಲ್ಲ ANSI ಪಾರ್ಮ್ಯಾಟ್‌ನಲ್ಲಿವೆ. ಈ ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು ಕನ್ನಡ ಟೈಪ್‌ ಮಾಡಬಹುದು. ಆದರೆ ಅದೇ ಕನ್ನಡ ಪಠ್ಯವನ್ನು ಬೇರೊಂದು ಕಂಪ್ಯೂಟರ್‌ನಲ್ಲಿ ನೋಡಬೇಕೆಂದರೆ ಅಲ್ಲೂ ಅದೇ ಸಾಫ್ಟ್‌ವೇರ್‌ ಅಥವ ಕನ್ನಡ ಫಾಂಟ್‌ ಸಪೂರ್ಟ್ ಇರಬೇಕು. ಇದು ANSI ಫಾಮ್ಯಾಟ್‌ನ ಬಹುದೊಡ್ಡ ನ್ಯೂನತೆ. ಮತ್ತೊಂದು ವಿಧಾನ ಯೂನಿಕೋಡ್ ‌(ಯೂನಿಕೋಡ್‌ನಲ್ಲಿ ಕೆಲವು ವ್ಯಂಜನಗಳೊಂದಿಗೆ ಊ ಸ್ವರ ಮೂಡುವುದಿಲ್ಲ, ಅದಕ್ಕೆ ಇಲ್ಲಿ UNICODE ಅನ್ನು ಯಾನಿಕೋಡ್‌ ಎಂದೇ ಬರೆಯಲು ಸಾಧ್ಯ. ) ಇದು ವಿಶ್ವದ ಕಂಪ್ಯೂಟಿಂಗ್‌ ಇಂಡಸ್ಟ್ರಿ ಸ್ಟಾಂಡರ್ಡ್‌ ಆಗಿರುವುದರಿಂದ ಇಲ್ಲಿ ಆ ಸಮಸ್ಯೆ ಉದ್ಭವಿಸುವುದಿಲ್ಲ. ವಿಂಡೋಸ್‌ನಲ್ಲಿರುವ TUNGA ಫಾಂಟ್‌ ಯೂನಿಕೋಡ್‌ಗೆ ಉದಾಹರಣೆ. ಇಲ್ಲಿ ಟೈಪ್‌ ಮಾಡುವುದಕ್ಕಷ್ಟೆ ಸಾಫ್ಟ್‌ವೇರ್‌ನ ಅಗತ್ಯ ಅದನ್ನು ಕನ್ನಡ ಇಲ್ಲದ ಯಾವುದೇ ಕಂಪ್ಯೂಟರ್‌ನಲ್ಲೂ ವೀಕ್ಷಿಸಬಹುದು. ಇದಕ್ಕೆ ಮಾಡಬೇಕಿರುವುದು ಇಷ್ಟೆ, ಇದಕ್ಕೆ ಸಂಬಂಧಪಟ್ಟ ಸಾಫ್ಟ್‌ವೇರ್‌ ಒಂದನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನ ಕಂಟ್ರೋಲ್‌ ಪ್ಯಾನೆಲ್‌ನಲ್ಲಿ ಸೆಟ್ಟಿಂಗ್ಸ್‌‌ನಲ್ಲಿ ಬದಲಾವಣೆ ಮಾಡಬೇಕು ಅಷ್ಟೆ

ಹಾಗಿದ್ದರೆ ಅದನ್ನು ಮಾಡುವುದು ಹೇಗೆ?..... ಮುಂದೆ ಓದಿ

ಕನ್ನಡ ಟೈಪ್‌ ಮಾಡುವ ವಿಧಾನಗಳು:

ಯೂನಿಕೋಡ್ ಆಧರಿಸಿ ಇಂಟರ್ನೆಟ್‌ನಲ್ಲಿ ಕನ್ನಡ ಟೈಪ್ ಮಾಡುವುದು ತೀರಾ ಸುಲಭ. ಕಂಪ್ಯೂಟರಿನಲ್ಲಿ Windows 2003 ಅಥವಾ XP ಇದ್ದರೆ, ಸಾಮಾನ್ಯವಾಗಿ ಕನ್ನಡ ಯೂನಿಕೋಡ್ ಅಕ್ಷರಗಳು ಕಾಣಿಸುತ್ತವೆ. ಆದರೆ, ಎಲ್ಲ ಬ್ರೌಸರುಗಳಲ್ಲಿ ಹಾಗೂ ಸಾಫ್ಟ್ ವೇರುಗಳಲ್ಲಿ ಯೂನಿಕೋಡ್ ಅಕ್ಷರ ಕಾಣಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಕ್ಷರಗಳಿದ್ದ ಜಾಗದಲ್ಲಿ ಅಥವಾ ಕಾಣಿಸಿದರೆ, ಆ ಸಾಫ್ಟ್ ವೇರ್ ಅಥವಾ ಬ್ರೌಸರ್ ಯೂನಿಕೋಡ್ ಅಕ್ಷರಗಳನ್ನು ಬೆಂಬಲಿಸುತ್ತಿಲ್ಲ ಎಂದು ಅರ್ಥ. Windows 95 ಹಾಗೂ 98, ಕನ್ನಡ ಯೂನಿಕೋಡನ್ನು ಬೆಂಬಲಿಸುವುದಿಲ್ಲ.

ಕಂಪ್ಯೂಟರ್‌ನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವ ನಾಲ್ಕು ವಿಧಾನಗಳು:

1. ಬರಹ IME/ಬರಹ ಯೂನಿಕೋಡ್‌ : (Input Method Editor) (ಬರಹ ಯೂನಿಕೋಡ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ)
2. ಬರಹ ಪ್ಯಾಡ್ : (ಬರಹ ಯೂನಿಕೋಡ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ)
3. ಗೂಗಲ್‌ ಟ್ರಾನ್ಸ್‌ಲೇಷನ್‌ ಟೂಲ್‌ಕಿಟ್‌: (ಗೂಗಲ್‌ ಟ್ರಾನ್ಸಲೇಷನ್‌ ಟೂಲ್‌ಕಿಟ್‌ಗೆ ಪ್ರವೇಶ ಮಾಡಲು ಇಲ್ಲಿ ಕ್ಲಿಕ್‌ ಮಾಡಿ, ಇದರ ಸೌಲಭ್ಯ ಪಡೆಯಲು ನೀವು G Mail ಹೊಂದಿರಬೇಕು.)
4. ಕ್ವಿಲ್ ಪ್ಯಾಡ್ ಆನ್ ಲೈನ್: (ಇದನ್ನು ತೆರೆಯಲು ಇಲ್ಲಿ ಕ್ಲಿಕ್ ಮಾಡಿ)


1. ಬರಹ IME : ಬರಹ - ಕನ್ನಡದ ಒಂದು ಸಾಫ್ಟ್ ವೇರ್. ಅಮೇರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ಶೇಷಾದ್ರಿ ವಾಸು ಕನ್ನಡದಲ್ಲಿ ಎನ್ನುವ ಸಾಫ್ಟ್‌ವೇರ್ ರೂಪಿಸಿ ಬಹುತೇಕ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡುವ ಅವಕಾಶ ಕಲ್ಪಿಸಿದರು. ಸರ್ಕಾರದ ಅಧಿಕೃತ ಸಾಫ್ಟ್‌ವೇರ್‌ ನುಡಿಯನ್ನು ಹೊರತುಪಡಿಸಿ ಇದು ಕನ್ನಡಿಗರ ಮೆಚ್ಚಿನ ಕನ್ನಡ ಸಾಫ್ಟ್‌ವೇರ್‌ ಆಗಿದೆ. ಮೊದಲು ANSI ಶಿಷ್ಟಾಚಾರದಲ್ಲಿದ್ದ ಬರಹ ಇದೀಗ UNICODEನಲ್ಲೂ ಲಭ್ಯವಿದೆ.


BarahaIME (ಬರಹದ ರೀತಿಯಲ್ಲಿಯೇ ಕೆಲವ ಮಾಡುವ Indic IME (Kannada)ಯನ್ನು ವೆಬ್‌ದುನಿಯಾದವರು ಅಭಿವೃದ್ಧಿಪಡಿಸಿದ್ದಾರೆ. ಇದು ಭಾಷಾ ಇಂಡಿಯಾ ವೆಬ್‌ಸೈಟ್‌ನಲ್ಲಿ ದೊರೆಯುತ್ತದೆ. ಒಂದು ಅಧ್ಬುತ ಅಪ್ಲಿಕೇಷನ್‌. ಇದನ್ನು ಬಳಸಿಕೊಂಡು ಕಂಪ್ಯೂಟರ್‌ ಅನ್ನು ಪೂರ್ತಿ ಕನ್ನಡಮಯವಾಗಿಸಿಬಿಡಬಹುದು. ಪೈಲ್‌ ಮತ್ತು ಫೋಲ್ಡರ್‌ಗಳನ್ನು ಕನ್ನಡದಲ್ಲಿಯೇ ಸೇವ್ ಮಾಡಬಹುದು. ಹಾರ್ಡ್‌ಡಿಸ್ಕ್ ಡ್ರೈವ್‌ಗಳನ್ನು ಕನ್ನಡದಲ್ಲಿ ರೀನೇಮ್‌ ಮಾಡಬಹುದು, MS Officeನ ( MS Officeನಲ್ಲಿ ಕನ್ನಡ ಬಳಸುವುದು ಹೇಗೆಂಧು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ )ಯಾವುದೇ ಅಪ್ಲಿಕೇಷನ್‌ನಲ್ಲಿ ಸುಲಭವಾಗಿ ಕನ್ನಡ ಟೈ್‌ಪ್‌ ಮಾಡಬಹುದು, ಇಂಟರ್ನೆಟ್‌ನಲ್ಲಿ ಕನ್ನಡ ಟೈಪ್‌ ಮಾಡಬಹುದು, ಎಂದರೆ ಗೂಗಲ್‌ ಸರ್ಚ್‌ ಬಾಕ್ಸ್‌ನಲ್ಲಿ ಕನ್ನಡದಲ್ಲಿ ಟೈಪ್‌ ಮಾಡಿ ನಾವು ಕನ್ನಡದಲ್ಲಿ ಹುಡುಕುತ್ತಿರುವ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಬಹುದು, ಬ್ಲಾಗ್‌ , ಸೋಷಿಯಲ್ ನೆಟವರ್ಕ್ಸ್, ವೆಬ್‌ಸೈಟ್‌ ಮುಂತಾದ ಕಡೆಗಳಲ್ಲಿ ಲೇಖನ ಅಥವಾ ಕಾಮೆಂಗಳನ್ನು ಕನ್ನಡದಲ್ಲೇ ಬರೆಯಬಹುದು, ನಿಮ್ಮ ಯಾವುದೇ ಮೇಲ್ ಬಾಕ್ಸ್‌ನಲ್ಲಿ ಕನ್ನಡದಲ್ಲಿ ಮೇಲ್‌ ಟೈಪ್‌ ಮಾಡಬಹುದು, ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಮೆಸೆಂಜರ್‌ ಆಗಿರಲಿ ಕನ್ನಡದಲ್ಲಿ ಚಾಟ್‌ ಮಾಡಬಹುದು.
ಕಂಪ್ಯೂಟರ್‌ನಲ್ಲಿ Baraha IMEಯನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸೆಟಪ್‌ ಮಾಡುವುದು ಹೇಗೆಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

2. ಬರಹ ಪ್ಯಾಡ್: ಇದು ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯಲು ರೂಪಿಸಿರುವ ಒಂದು ಪುಟ್ಟ ಅಪ್ಲಿಕೇಷನ್‌ ಸಾಫ್ಟ್‌ವೇರ್‌. ಇದು ನೋಟ್‌ಪ್ಯಾಡ್‌ನಂತೆಯೇ ಇದ್ದು ಭಾರತೀಯ ಭಾಷೆಗಳನ್ನು ಯೂನಿಕೋಡ್‌ನಲ್ಲಿ ಬರೆಯಲು ಅನುವು ಮಾಡಿಕೊಡುತ್ತದೆ. ಇದು ಬರಹ ಯೂನಿಕೋಡ್‌ ಸಾಫ್ಟ್‌ವೇರ್ ಜೊತೆಯಲ್ಲೇ ಬರುತ್ತದೆ. ಹೀಗಾಗಿ ನೀವು ಪ್ರತ್ಯೇಕವಾಗಿ ಇನ್‌ಸ್ಟಾಲ್‌ ಮಾಡುವ ಅಗತ್ಯವಿಲ್ಲ. BarahaUnicode 2.0 ಇನ್‌ಸ್ಟಾಲ್‌ ಮಾಡಿಕೊಂಡರೆ BarahaIME ಮತ್ತು BarahaPad ಎರಡರ ಸೌಲಭ್ಯವೂ ದೊರೆಯುತ್ತವೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

3. ಗೂಗಲ್ ಟ್ರಾನ್ಸ್‌ಲೇಷನ್‌ ಟೂಲ್‌ ಕಿಟ್‌ : ಇದು ಇಂಟರ್ನೆಟ್‌ನಲ್ಲಿ ಪೈಲ್‌ಗಳನ್ನು ಕನ್ನಡದಲ್ಲಿ ಅಪ್‌ಡೇಪ್‌ ಮಾಡಲು ಹೇಳಿ ಮಾಡಿಸಿದ ಟೂಲ್‌. GMail ಮೂಲಕ ಲಾಗಿನ್‌ ಆಗಿ ಅಲ್ಲಿರುವ ಗೂಗಲ್‌ ಡಾಕುಮೆಂಟ್ಸ್‌‌ನಲ್ಲಿ ನಿಮ್ಮ ಯಾವುದೇ ಭಾಷೆಯ ಯಾವುದೇ ಫೈಲ್‌ಗಳನ್ನು ಸೇವ್ ಮಾಡಬಹುದು, ನಿಮ್ಮ ರೆಸ್ಯೂಮ್‌, ಲೆಟರ್‌ ಯಾವುದೇ ಇರಲಿ ಅವುಗಳನ್ನು ಈ ಟೂಲ್‌ಕಿಟ್ ಬಳಸಿಕೊಂಡು ಅಲ್ಲಿಯೇ ಕನ್ನಡದಲ್ಲಿ ಎಡಿಟ್‌ ಮಾಡಿ ಆನ್‌ಲೈನ್‌ನಲ್ಲೇ ಸೇವ್ ಮಾಡಬಹುದು. ಈ ಟೂಲ್‌ಕಿಟ್‌ನಲ್ಲಿ ಭಾರತೀಯ ಭಾಷೆಗಳಷ್ಟೇ ಅಲ್ಲ ವಿಶ್ವದ ಹಲವು ಭಾಷೆಗಳ ಸೌಲಭ್ಯವನ್ನು ಗೂಗಲ್‌ ಟ್ರಾನ್ಸ್‌ಲೇಷನ್‌ ಟೂಲ್‌ ಕಿಟ್‌ ನೀಡುತ್ತದೆ.

ಇದರ ಬಗ್ಗೆ ಮತ್ತಷ್ಟು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ


ಗೂಗಲ್ ಟ್ರಾನ್ಸ್‌ಲೇಷನ್‌ ಟೂಲ್‌ ಕಿಟ್‌ ಬಳಸಲು ಇಲ್ಲಿ ಕ್ಲಿಕ್ ಮಾಡಿ.

4. ಕ್ವಿಲ್ ಪ್ಯಾಡ್ ಆನ್ ಲೈನ್ ಕನ್ನಡ ಟೂಲ್ : ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ಬಿಡುಗಡೆ ಆಗುವುದಕ್ಕೂ ಮೊದಲೇ ಬೆಂಗಳೂರಿನ Tachyon Technologies ಕಂಪನಿ ಕ್ವಿಲ್ ಪ್ಯಾಡ್ ಎಂಬ ಆನ್ ಲೈನ್ ಕನ್ನಡ ಟ್ರಾನ್ಲ್ ಲಿಟರೇಶನ್ ಟೂಲ್ ಬಿಡುಗಡೆ ಮಾಡಿತ್ತು. ಈ ಟೂಲನ್ನು ಕೆಲವು ಮೊಬೈಲ್ ಫೋನ್ ಕಂಪನಿಗಳೂ ಹ್ಯಾಂಡ್ ಸೆಟ್ಟಿನಲ್ಲಿ ಅಳವಡಿಸಿವೆ. ಇದನ್ನು ಕೂಡ ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ರೀತಿಯೇ ಬಳಸಬಹುದು. ಇದೂ ಕೂಡ ಆನ್‌ಲೈನ್‌ ಎಡಿಟರ್‌ ಆಗಿದ್ದು ಕನ್ನಡ ಸಾಫ್ಟ್‌ವೇರ್‌ ಇನ್‌ಸ್ಟಾಲ್‌ ಮಾಡುವ ಗೊಂದಲವಿಲ್ಲದೆ ಇಂಟರ್ನೆಟ್‌ನಲ್ಲಿ ಕನ್ನಡವನ್ನು ಎಡಿಟ್‌ ಮಾಡುವ ಅವಕಾಶ ಕಲ್ಪಿಸುತ್ತದೆ. ಕ್ವಿಲ್‌ಪ್ಯಾಡ್‌ ಕನ್ನಡ ಟೂಲ್ ಬಳಸಲು ಇಲ್ಲಿ ಕ್ಲಿಕ್ ಮಾಡಿ.


C. ಕನ್ನಡ ಅಕ್ಷರಗಳನ್ನು ಟೈಪ್‌ ಮಾಡುವುದನ್ನು ಕಲಿಯಬೇಕೆ?
ಕಂಪ್ಯೂಟರ್‌ನಲ್ಲಿ ಕನ್ನಡ ಟೈಟ್‌ ಮಾಡಲು ಹಲವು ಕೀಬೋರ್ಡ್ ವಿನ್ಯಾಸಗಳಿವೆ. ಬರಹ ಮತ್ತು ನುಡಿಯನ್ನು ಇಲ್ಲಿ ವಿವರಿಸಿದ್ದೇನೆ.

ಬರಹ ಕೀಬೋರ್ಡ್:
ಇದು ಅತ್ಯಂತ ಸರಳ ಕನ್ನಡ ಟೈಪಿಂಗ್‌ ಕೀಬೋರ್ಡ್ ವಿನ್ಯಾಸ (ಟೈಪಿಂಗ್ ಕೀಬೋರ್ಡ್ ವಿನ್ಯಾಸ ಎಂದರೆ ಇಂಗ್ಷೀಷ್ ಅಕ್ಷರಗಳನ್ನು ಒತ್ತುವ ಮೂಲಕ ಕನ್ನಡ ಅಕ್ಷರಗಳನ್ನು ಮೂಡಿಸುವುದು, ಯಾವ ಅಕ್ಷರಗಳನ್ನು ಒತ್ತಿದರೆ ಯಾವ ಅಕ್ಷರ ಮೂಡಬೇಕು ಎನ್ನುವುದನ್ನು ಕೀಬೋರ್ಡ್‌ ವಿನ್ಯಾಸಗಳು ನಿರ್ಧರಿಸುತ್ತವೆ.) ಇದು ಕನ್ನಡ ನನ್ನ ಮಾತೃ ಭಾಷೆ ಎನ್ನುವುದನ್ನು kannada nanna maatru bhaashe, ಎಂಬಂತೆ ಟೈಪ್‌ ಮಾಡುವ ವಿಧಾನದ್ದು. ಕನ್ನಡ ಇಲ್ಲದ ಮೊಬೈಲ್‌ನಲ್ಲಿ ನಮ್ಮ ಹೃದಯದ ಭಾವನೆಗಳನ್ನು ಪರಬಾಷೆಯಲ್ಲಿ ಅಭಿವ್ಯಕ್ತಿಸಲು ಕಷ್ಟವಾದಾಗ ನಮ್ಮದೇ ಭಾಷೆಯಲ್ಲಿ ಅಭಿವ್ಯಕ್ತಿಸಲು ನಾವು ಬಳಸುವ ಎಸ್ಸೆಮ್ಮಸ್‌ ಕನ್ನಡದ ಮಾದರಿಯದ್ದು ಈ ವಿನ್ಯಾಸ.
ಈ ವಿನ್ಯಾಸವನ್ನು ಕಲಿಯಲು ಇಲ್ಲಿ ಕ್ಲಿಕ್ ಮಾಡಿ

ಕಗಪ (ಕನ್ನಡ ಗಣಕ ಪರಿಷತ್ತು) ಕೀಬೋರ್ಡ್:
ಇದು ನುಡಿ ಸಾಫ್ಟ್ ವೇರಿನ ಕೀಬೋರ್ಡ್. ಇದು ಬಹುತೇಕ ಕನ್ನಡ ಟೈಪ್‌ರೈಟರ್‌ ಮಾದರಿಯದ್ದು. ಇದನ್ನು ಕಲಿತರೆ ಟೈಪ್‌ ಮಾಡುವುದು ಬಹಳ ಸುಲಭ. ಇದು ನಮ್ಮ ಟೈಪಿಂಗ್‌ ಸಮಯವನ್ನು ಉಳಿಸುತ್ತದೆ. ಇದನ್ನು ಕಗಪ ಕೀಬೋರ್ಡ್‌ ಎನ್ನುತ್ತಾರೆ.

ಇದನ್ನು ಕಲಿಯುವ ಆಸಕ್ತಿ ನಿಮಗಿದ್ದರೆ ಇಲ್ಲಿ ಕ್ಲಿಕ್ಕಿಸಿ.

Friday, October 16, 2009

The following precautions are to be taken care of when playing with Fireworks.




"Let this diwali burn all your bad times and enter you in good times...."

1.Store water in at least two buckets and keep it ready near the place of fireworks celebrations.

2.Keep a wet towel ready to cover your exposed parts when some crackers may accidentally burst in the face.

3.Keep the regulators of your cooking gas cylinders turned off and do not keep the cylinders in balconies or open spaces to keep them protected from stray rockets.

4.Put earplugs (or cotton wool) in your ears.

5.Wear cotton clothes while playing with fireworks. Wear full undergarments to be on the safe side to protect your skin.

6.Keep small portable extinguishers handy for urgent use.

7.Keep the telephone numbers of fire, ambulance, police etc stored on your cells and by the telephone.

8.Use proper directions when handling fireworks. Don’t forget to physically examine the individual pieces of crackers etc before lighting them as some have wicks on the wrong end that eventually may blast or burn on your side.

9.Keep some safe distance from others who are celebrating in the fireworks to avoid collisions. Watch your step when using fireworks on the terraces especially.

10.Use noninflammable containers to put the rockets ready for lighting and release.

11.The elderly will do well to keep themselves indoors as long as possible to keep away form noise and air pollution for longer periods. Those sick should see that they have not missed their regular dose of medicines like BP, Diabetic tablets etc.

12.Drink adequate amounts of water on the night of Diwali.

13.Keep the unused/ reserve stock of fireworks away from the lighting areas.

14.See that the decorative lamps lining the parapet walls should not burn any cloth lines and leaf and flower garlands hanging thereabouts.

15.Check the interior and the roof of your home from time to time during the night to detect any fire. To the extent possible, keep at home on the night of Diwali day to watch your house.

16. In the stock of fireworks, separate explosive crackers from those illuminating ones and keep them separately in different boxes to lessen the impact in case of sudden fire.

17. When playing with chakras and pencils/ sparklers, raise your head as well as your hand a bit higher at convenient angle to avoid sparks falling on your feet and clothes.

18. Do not rub your eyes in case of smoke getting into them. Wash your eyes with cold water.

19. Keep cracking with an eye on safety.

Happy and Prosperous Diwali Celebrations....

ಸಹೃದಯ ಕನ್ನಡಿಗರೆಲ್ಲರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು

Thursday, October 15, 2009

Stunning Pictures and Stories of Adventure

Watch out for extremly adventurous:

Discovery Time Wrap

Watch out for Discovey's marvellous Time Wrap samples

Wednesday, October 14, 2009

Newspapers & Magazines - Kannada (Karnataka)

Dailes:

Kannada Prabha - Kannada Newspaper from the New Indian Express

Janatha Madhyama - published from Hassan

Prajavani - Kannada News Paper from Deccan Herald

Praja Pragathi - Tumkur Kannada newspaper

Vartha Bharathi- published form Manipala and Bangalore

Vijaykarnataka- published by times group

Sanjevani-evening daily

ee sanje-evening daily

Udayavani


Magazines:

Roopatara

Taranga

Kannada times

All rounder


Tabloids:

Agni

Lankesh

Lankesh pathrike

Ee bhanuvaara

Chirathe

Kannadanaadi